ಯಾರೇ ಕೂಗಾಡಲಿ ಊರೇ ಹೋರಾಡಲಿ ನೆಮ್ಮದಿಗೆ ಭಂಗವಿಲ್ಲ ಅಂದ್ರು ಹೆಬ್ಬಾರ್!

ಕಾರವಾರ: ಚುನಾವಣಾ ದಿನಾಂಕ ಹತ್ತಿರಬರುತ್ತಿದ್ದಂತೆಯೇ ರಜಕೀಯ ನಾಯಕರು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಅಂತೆಯೇ ಇದೀಗ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ (Shivaram Hebbar) ಅವರು ಹಾಡಿನ ಮೂಲಕ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಸಂಪತ್ತಿಗೆ ಸವಾಲು ಚಿತ್ರಗೀತೆಯ ಹಾಡಿನ ಮೂಲಕವೇ ಶಿವರಾಂ ಹೆಬ್ಬಾರ್ ತಮ್ಮ ಭಾಷಣ ಆರಂಭಿಸಿದರು. ಈ ಮೂಲಕ ತಾವು ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಹರಕೆ ಕುರಿ ಮಾಡ್ಬೇಡಿ: ನಿಖಿಲ್ ಸಲಹೆ

ಯಾರೇ ಕೂಗಾಡಲಿ ಊರೇ ಹೋರಾಡಲಿ ನೆಮ್ಮದಿಗೆ ಭಂಗವಿಲ್ಲ ಹಾಡು ಹೇಳಿ ಎಚ್ಚರಿಕೆ ನೀಡಿದರು. ಮುಂಡಗೋಡಿನ ಜನ ನನ್ನ ಜೊತೆ ಇರುವವರೆಗೂ ತಾವು ಯಾವುದಕ್ಕೂ ತಲೆ ಕೆಡಿಸಿಕೊಳಲ್ಲ. ಯಾರು ಏನೆ ಅಂದ್ರೂ ತಲೆ ಕೆಡಿಸಿಕೊಳಲ್ಲ. ಗೆಲುವು ನಂದೇ ಎಂಬ ಸಂದೇಶವನ್ನು ಸಾರಿದರು.

 

Comments

Leave a Reply

Your email address will not be published. Required fields are marked *