ಕೆಸರಲ್ಲಿ ಸಿಲುಕಿದ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಕಾರು

ರಾಯಚೂರು: ಉದ್ಘಾಟನೆ ಕಾರ್ಯಕ್ರಮಕ್ಕೆಂದು ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಇದ್ದ ಕಾರು ಕೆಸರಿಗೆ ಸಿಲುಕಿ ಕೆಲಕಾಲ ಪರದಾಟ ನಡೆಸಿದರು.

ನಗರದ ಮಾವಿನಕೆರೆ ಆವರಣದಲ್ಲಿ ಉದ್ಘಾಟನೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಆಗಮಿಸಿದ್ದರು. ಈ ವೇಳೆ ನಿರಂತರ ಮಳೆ ಹಿನ್ನೆಲೆಯಲ್ಲಿ ಅವರಿದ್ದ ಕಾರಿನ ಚಕ್ರ ಕೆಸರಿನಲ್ಲಿ ಸಿಲುಕಿತ್ತು. ಈ ವೇಳೆ ಕಾರನ್ನು ಮೇಲಕ್ಕೆತ್ತಲು ಸಚಿವರು, ಚಾಲಕ, ಪೊಲೀಸರು ಕೆಲಕಾಲ ಪರದಾಟ ನಡೆಸಿದರು. ಇದನ್ನೂ ಓದಿ: ನೆಲಮಂಗಲದ ಗೋವಿಂದಪುರ ಗ್ರಾಮದ ಯುವಕರಿಗಿಲ್ಲ ಮದುವೆ ಭಾಗ್ಯ!

ಇಲ್ಲಿನ ಮಾವಿನಕೆರೆ ಬಳಿ ನಿರ್ಮಾಣ ಮಾಡಿರುವ ಮತ್ಸ್ಯಾಲಯ ಉದ್ಘಾಟನೆಗೆ ಬಂದಿದ್ದರು. ಸಚಿವರ ಜೊತೆ ಆಗಮಿಸಿದ್ದ ರಾಯಚೂರು ಡಿಸಿ ಹಾಗೂ ಸಿಇಓ ಕಾರುಗಳು ಸಹ ಕೆಸರಿನಲ್ಲಿ ಸಿಲುಕಿತ್ತು. ಕೊನೆಗೆ ಪೊಲೀಸರು ಹಾಗೂ ಸ್ಥಳೀಯರ ಸಹಾಯದಿಂದ ಕಾರುಗಳನ್ನು ಚಾಲಕರು ಹೊರತೆಗೆದರು. ಇದನ್ನೂ ಓದಿ: ಡೋಲೋ ಮಾರಾಟಕ್ಕಾಗಿ ವೈದ್ಯರಿಗೆ 1 ಸಾವಿರ ಕೋಟಿ ಮೌಲ್ಯದ ಉಡುಗೊರೆ – IT ತನಿಖೆಯಿಂದ ಅಕ್ರಮ ಬಯಲು

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *