ವಿಧಾನಸೌಧಕ್ಕೆ ಬರಿಗಾಲಲ್ಲಿ ನಡೆದು ಬಂದ ಸಚಿವ ರೇವಣ್ಣ

ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ವಿಧಾನಸೌಧಕ್ಕೆ ಚಪ್ಪಲಿ ಹಾಕದೇ ಬರಿಗಾಲಲ್ಲಿ ನಡೆದುಕೊಂಡು ಬಂದಿದ್ದಾರೆ.

ಈ ವೇಳೆ ರೇವಣ್ಣ ಮಾಧ್ಯಮಗಳೊಂದಿಗೆ ಮಾತನಾಡಿ, “ಏನೂ ಆಗಲ್ಲ, ಇಂದು ಬಜೆಟ್ ನಡೆಸುತ್ತೇವೆ. ಏನೂ ಆಗಲ್ಲ ನೀವು ತಲೆ ಕಡಿಸಿಕೊಳ್ಳಬೇಡಿ. ಬಿಜೆಪಿಗೆ ರಾಜ್ಯದ ಬಗ್ಗೆ ಯಾವುದೇ ಚಿಂತನೆ ಇಲ್ಲ. ಇಂದು ಬಜೆಟ್ ಮಂಡನೆ ಆಗುತ್ತೆ. ರೈತರ ಪರ, ಬಡವರ ಪರ ಸರ್ಕಾರ ಬಜೆಟ್ ಇರುತ್ತೆ. ಯಾರನ್ನು ಆಪರೇಷನ್ ಮಾಡುವುದಕ್ಕೆ ಆಗಲ್ಲ. ಯಡಿಯೂರಪ್ಪ ಆಪರೇಷನ್ ಮಾಡುವುದಕ್ಕೆ ಹೋಗಿ ಫೇಲ್ ಆಗಿದ್ದಾರೆ. ಆಪರೇಷನ್ ಮಾಡುವುದಕ್ಕೆ 15 ದಿನ ಆಪರೇಷನ್ ಥಿಯೇಟರ್ ಖಾಲಿ ಇಲ್ಲ” ಎಂದು ಹೇಳಿದ್ದಾರೆ.

ಇದೇ ವೇಳೆ ಸಿಎಂ ಕುಮಾರಸ್ವಾಮಿ ಬಗ್ಗೆ ಮಾತನಾಡಿದ ಅವರು, “ಕುಮಾರಸ್ವಾಮಿ ಅವರನ್ನು ಟಚ್ ಮಾಡಿದವರಿಗೆ ಏನಾದರೂ ಆಗುತ್ತೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಹಾಗಾಗಿ ಸರ್ಕಾರಕ್ಕೆ ಏನು ಆಗುವುದಿಲ್ಲ. ಯಡಿಯೂರಪ್ಪ ಆಪರೇಷನ್ ಫೇಲ್ ಆಗಿದೆ. ಸರ್ಕಾರಕ್ಕೆ ಏನು ಆಗುವುದಿಲ್ಲ” ಎಂದು ಸಚಿವ ರೇವಣ್ಣ ಹೇಳಿಕೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *