ಕಾಂಗ್ರೆಸ್ ಸಭೆಗೆ ಬಂದು ಗಲಾಟೆ ಮಾಡಿದ್ರೆ ಮಾನನಷ್ಟ ಕೇಸ್ – ಬಿಜೆಪಿಗರಿಗೆ ಸಚಿವ ರಾಯರೆಡ್ಡಿ ಅವಾಜ್

ಕೊಪ್ಪಳ: ಬಿಜೆಪಿಯವರು ಯಾರಾದರೂ ಕಾಂಗ್ರೆಸ್ ಸಭೆಗೆ ಬಂದು ಮಾತಾಡಿದರೆ ಕೇಸ್ ಹಾಕಿಸುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಬಿಜೆಪಿಗರಿಗೆ ಅವಾಜ್ ಹಾಕಿದ್ದಾರೆ.

ಗುರುವಾರ ನಡೆದ ಯಲಬುರ್ಗಾ ತಾಲೂಕಿನ ಮುರುಡಿ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಭೆಯಲ್ಲಿ ನೀವು ಮಾತಾಡಿದ್ರೆ ಕೇಸ್ ಹಾಕಬೇಕಾಗತ್ತೆ. ಅಷ್ಟೇ ಅಲ್ಲದೇ ಬಿಜೆಪಿ ಕಾರ್ಯಕರ್ತರಿಗೆ ಮಾನನಷ್ಟ ಕೇಸ್ ಹಾಕಿಸುತ್ತೇನೆ ಎಂದಿದ್ದಾರೆ.

ಇದು ಕಾಂಗ್ರೆಸ್ ಮೀಟಿಂಗ್, ಬಿಜೆಪಿಯವರು ಹೊರಗೆ ಹೋಗಿ ಎಂದು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿಯವರನ್ನ ಹೊರ ಹಾಕಿ ಎಂದಿದ್ದಾರೆ.  ಬಸವರಾಜ್ ರಾಯರೆಡ್ಡಿ ಸಭೆಯಲ್ಲಿ ಪ್ರಶ್ನೆ ಮಾಡಿದ್ದಕ್ಕೆ, ನೀವು ಹೋಗಿ ಬಿಜೆಪಿ ಸಭೆಯಲ್ಲಿ ಕೇಳಿ ಎಂದು ಉಡಾಫೆಯ ಮಾತನಾಡಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರ ಮೀಟಿಂಗ್ ನೀವು ಇಲ್ಲಿ ಮಾತಾಡಬೇಡಿ ಎಂದಿದ್ದಾರೆ.

 

Comments

Leave a Reply

Your email address will not be published. Required fields are marked *