ಸಿದ್ದಗಂಗಾ ಶ್ರೀಗಳನ್ನು ಭೇಟಿಯಾದ ಸಚಿವ ಎಂ.ಬಿ.ಪಾಟೀಲ್- ಭೇಟಿಯ ನಂತರ ಹೇಳಿದ್ದು ಹೀಗೆ

ತುಮಕೂರು: ಸಚಿವ ಎಂ.ಬಿ.ಪಾಟೀಲ್ ಇಂದು ಮತ್ತೊಮ್ಮೆ ಸಿದ್ದಗಂಗಾ ಶ್ರೀಗಳನ್ನು ಭೇಟಿಯಾದರು. ಎಲ್ಲವೂ ಒಳ್ಳೆಯದಾಗುತ್ತದೆ. ಬುದ್ದಿಗಳು ಹೇಳಿದಂತೆ ಎಲ್ಲವೂ ನಡೆಯಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇತ್ತೀಚಿಗೆ ನಡೆದ ಬೆಳವಣಿಗೆಯಿಂದ ನನಗೆ ಯಾವುದೇ ಬೇಜಾರಾಗಿಲ್ಲ. ಸಿದ್ದಗಂಗಾ ಶ್ರೀಗಳು ನಮ್ಮ ಪಾಲಿನ ದೇವರು. ಅವರು ಆಧುನಿಕ ಬಸವಣ್ಣ ಈಗ ಎಲ್ಲಾ ವಿವಾದ ಅಂತ್ಯಗೊಂಡಿದೆ. ಶ್ರೀಗಳು ನನಗೆ ಏನೂ ಹೇಳಿಲ್ಲ, ಆಶೀರ್ವಾದ ಮಾಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಶಂಕರ್ ಬಿದರಿ ಜೊತೆಗೆ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಯಾವುದೇ ವಿವಾದಗಳಿಲ್ಲಾ, ಎಲ್ಲಾ ವಿವಾದಗಳು ಅಂತ್ಯಗೊಂಡಿವೆ. ವಿವಾದಗಳಿಂದ ನನಗೆ ಯಾವುದೇ ರೀತಿಯಲ್ಲಿ ಬೇಜಾರಾಗಿಲ್ಲಾ. ನಾವು ಮಠಕ್ಕೆ ಬಂದಿದ್ದೇವೆ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಎಲ್ಲವೂ ಒಳ್ಳೆಯದಾಗಲಿದೆ. ಎಲ್ಲಾ ಶ್ರೀಗಳು ಹೇಳಿದಂತೆ ಆಗಲಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *