ಡೋಂಟ್ ವರಿ, ಕನ್ನಡದ ಕಲಾವಿದರೆಲ್ಲರೂ ಪ್ರಾಮ್ಟ್ ಇರ್ತಾರೆ: ಜಯಮಾಲಾ ವಿಶ್ವಾಸ

ಉಡುಪಿ: ಕನ್ನಡದ ಕಲಾವಿದರೆಲ್ಲರೂ ಪ್ರಾಮ್ಟ್ ಇರ್ತಾರೆ. ಅವರು ಕ್ರಮ ಪ್ರಕಾರ ತೆರಿಗೆ ಕಟ್ಟಿರುತ್ತಾರೆ. ಐಟಿ ದಾಳಿ ವಿಚಾರದಲ್ಲಿ ಯಾರೂ ಆತಂಕಪಡಬೇಡಿ ಎಂದು ಸಚಿವೆ, ನಟಿ ಜಯಮಾಲಾ ವಿಶ್ವಾಸ ವ್ಯಕ್ತಪಡಿಸಿದರು.

ಸ್ಯಾಂಡಲ್ ವುಡ್ ಮೇಲೆ ಐಟಿ ದಾಳಿ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಐಟಿಯವರು ಅವರ ಕೆಲಸ ಮಾಡುತ್ತಾರೆ. ಯಾರಿಗೂ ಇದರಿಂದ ತೊಂದರೆ ಆಗುವುದಿಲ್ಲ. ಕನ್ನಡ ಚಿತ್ರರಂಗ ಎತ್ತರಕ್ಕೆ ಬೆಳೆದಿರೋದು ಈ ದಾಳಿ ನೋಡಿದಾಗ ಗೊತ್ತಾಗುತ್ತದೆ. ಕಲಾವಿದರಿಗೆ ಈ ದಾಳಿಯಿಂದ ಏನೂ ಹಿನ್ನಡೆ ಆಗೋದಿಲ್ಲ. ರಾಜ್ ಕುಮಾರ್ ಮಕ್ಕಳು ಯಶ್ – ಸುದೀಪ್ ಬಹಳ ಪ್ರಾಮ್ಟ್ ಇದ್ದಾರೆ ಎಂದರು. ಕಲಾವಿದರ ಬಳಿ ಎರಡು ಒಡವೆ, ಬೆಳ್ಳಿತಟ್ಟೆ, ಚೊಂಬು ಇರಬಹುದು ಎಂದು ನಕ್ಕರು.

ನಿಯಮ ಪ್ರಕಾರ ಎಲ್ಲರೂ ತೆರಿಗೆ ಕಟ್ಟಲೇಬೇಕು. ಎಲ್ಲಾ ಕಲಾವಿದರು ತೆರಿಗೆ ಕಟ್ಟಿರುತ್ತಾರೆ ಅಂತ ಜಯಮಾಲಾ ಹೇಳಿದರು. ಇದೇ ವೇಳೆ ಪ್ರಧಾನಿ ಮೋದಿ ದಾಳಿ ಮಾಡಿಸಿದ್ದಾರಂತೆ ಹೌದಾ ಅಂತ ಕೇಳಿದ್ರೆ ಅದೆಲ್ಲ ನಂಗೆ ಗೊತ್ತಿಲ್ಲ ಅಂತ ಹೇಳಿದರು.

ಶಬರಿಮಲೆ ವಿಚಾರಕ್ಕೆ ಗರಂ:
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಯಮಾಲಾ, ಶಬರಿಮಲೆ ಬಗ್ಗೆ ಮಾತಾಡಿ ನಾನು ಸುಸ್ತಾಗಿ ಬಿಟ್ಟೆ. ನಾನು ಈ ಬಗ್ಗೆ ಏನೂ ಮಾತಾಡಲ್ಲ. ದೇವರನ್ನು ಯಾರೂ ವ್ಯಾಪಾರಕ್ಕೆ ಇಡಬಾರದು. ನಾನು ದೇವರನ್ನು ನಂಬಿಕೆಯ ತಳಹದಿಯಲ್ಲಿ ನೋಡುವವಳು. ಶಬರಿಮಲೆಗೆ ಭಕ್ತಿಯಿಂದ ಹೋಗಬೇಕು ಎಂಬುದು ನನ್ನ ಭಾವನೆ. ದೇವರ ದರ್ಶನ ಖುಷಿಯಾಗಿದ್ಯಾ ಅಂತ ಹೋದವರನ್ನು ಕೇಳಿ ಎಂದು ಅವರು ಕೋಪಗೊಂಡರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *