ಮುಜರಾಯಿ ಇಲಾಖೆಗೆ ಇಬ್ಬಿಬ್ರು ಮಿನಿಸ್ಟರ್- ಇಲ್ಲಿ ಇವ್ರದ್ದೇ ಹವಾ!

ಬೆಂಗಳೂರು: ಮುಜರಾಯಿ ಇಲಾಖೆಯಲ್ಲಿ ಈಗ ಇಬ್ಬರು ಮಿನಿಸ್ಟರ್. ಕೆಲವೊಮ್ಮೆ ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಗೆ ನಮ್ ಮಿನಿಸ್ಟರ್ ಯಾರಪ್ಪ ಅನ್ನೋ ಕನ್‍ಫ್ಯೂಶನ್ ಶುರುವಾಗಿದೆ ಎಂದು ಹೇಳಲಾಗುತ್ತಿದೆ.

ಹೌದು. ಸಚಿವ ರಾಜಶೇಖರ್ ಪಾಟೀಲ್ ಅವರಿಗಿಂತ ಮುಜರಾಯಿ ಇಲಾಖೆಯ ಬಗ್ಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರಂತೆ. ಅಷ್ಟೇ ಅಲ್ಲದೇ ಎಚ್.ಡಿ.ರೇವಣ್ಣ ಮುಜರಾಯಿ ಸಚಿವರಗಿಂತ ಮೊದಲೇ ಅಧಿಕಾರಿಗಳ ಅನೌಪಚಾರಿಕ ಮೀಟಿಂಗ್ ಬೇರೆ ಮಾಡಿದ್ದಾರಂತೆ. ಎಲ್ಲಾ ದೇವಾಲಯದ ಆದಾಯದ ವಿವರ, ಅಲ್ಲಿನ ಅರ್ಚಕರಿಗೆ ಕೊಡುತ್ತಿರುವ ವೇತನದ ಬಗ್ಗೆ ಲಿಸ್ಟ್ ತರುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.

ಎಲ್ಲ ನಾಯಕರಿಗಿಂತ ಸ್ವಲ್ಪ ಹೆಚ್ಚು ದೈವ ಭಕ್ತರಾಗಿರುವ ರೇವಣ್ಣ, ಕೆಲ ಆಪ್ತ ಮುಜರಾಯಿ ಅರ್ಚಕರ ವೇತನ ಹೆಚ್ಚಿಸಲು ಜೊತೆಗೆ ಹಾಸನ ಕಡೆಯ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಪಡೆಯೋಕೆ ಹೀಗೆಲ್ಲ ಕೆಲಸ ಮಾಡುತ್ತಿದ್ದಾರೆ ಅನ್ನೋ ಗುಸು ಗುಸು ಸುದ್ದಿಯೂ ಹರಿದಾಡುತ್ತಿದೆ. ಎಲ್ಲರ ಲಿಸ್ಟ್ ಹಿಡ್ಕೊಂಡು ಬನ್ನಿ ಮತ್ತೆ ಸಭೆ ಮಾಡ್ತೀನಿ ಅಂತಾ ಅಧಿಕಾರಿಗಳಿಗೆ ಎಚ್.ಡಿ.ರೇವಣ್ಣ ಸೂಚನೆ ನೀಡಿದ್ದಾರೆ ಅಂತ ಮುಜರಾಯಿ ಉನ್ನತ ಇಲಾಖೆಯ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

Comments

Leave a Reply

Your email address will not be published. Required fields are marked *