ರಾಜ್ಯದಲ್ಲಿ ಹೈಡ್ರಾಮ – ಯಾವುದೇ ಚಿಂತೆಯಿಲ್ಲದೇ ವಿದೇಶಕ್ಕೆ ಹಾರಿದ ರೇವಣ್ಣ

ಬೆಂಗಳೂರು: ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯದಿಂದಾಗಿ ರಾಜ್ಯದಲ್ಲಿ ಸರ್ಕಾರ ಇದೆಯೇ ಇಲ್ಲವೇ ಎನ್ನುವ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ. ಈ ಮಧ್ಯೆ ಸೂಪರ್ ಸಿಎಂ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ.

ಸಹೋದರ ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಗಂಡಾಂತರ ಎದುರಾಗಿದ್ದಕ್ಕೆ ಸಚಿವರು ಯಾವುದೇ ರೀತಿಯ ಟೆನ್ಶನ್ ತಗೆದುಕೊಂಡಿಲ್ಲ. ರಾಜಕೀಯ ಜಂಜಾಟವೇ ಬೇಡ ಅಂತ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವ ರೇವಣ್ಣ ಅವರು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಸಚಿವರು ಒಂದು ವಾರ ಕಾಲ ಅಲ್ಲಿ ಅಧ್ಯಯನ ನಡೆಸಿ ಮರಳಲಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ.

ವಿದೇಶಕ್ಕೆ ಹಾರಿದ್ದನ್ನು ಕಂಡು ಸರ್ಕಾರ ಉಳಿಯುತ್ತೆ ಅಂತಾ ಯಾರಾದ್ರೂ ರೇವಣ್ಣಗೆ ಜ್ಯೋತಿಷ್ಯ ಹೇಳಿದ್ರಾ? ಹೆಚ್‍ಡಿ ರೇವಣ್ಣಗೆ ಸರ್ಕಾರ ಬೀಳಲ್ಲ ಎನ್ನುವ ಅಚಲ ನಂಬಿಕೆ ಬಂದುಬಿಟ್ಟಿದ್ಯಾ ಎನ್ನುವ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *