ನಿಮ್ಮ ಕೆಲಸದಿಂದ ಎದೆ ಒಡೆದುಕೊಳ್ಳುವ ಪರಿಸ್ಥಿತಿ ಬಂದಿದೆ- ಅಧಿಕಾರಿಗಳ ಕಾರ್ಯವೈಖರಿಗೆ ಜಿಟಿಡಿ ಗರಂ

ಮೈಸೂರು: ನಿಮ್ಮ ಕೆಲಸದಿಂದ ಎದೆ ಒಡೆದುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರು ಅಧಿಕಾರಿಗಳ ಕಾರ್ಯವೈಖರಿಗೆ ಗರಂ ಆಗಿದ್ದಾರೆ.  ಇದನ್ನೂ ಓದಿ: ಎಷ್ಟಾದರೂ ಖರ್ಚು ಮಾಡಿ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಿ- ಅಧಿಕಾರಿಗಳಿಗೆ ದೇಶಪಾಂಡೆ ಎಚ್ಚರಿಕೆ

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಸಚಿವ ಜಿಟಿಡಿ, ನಿಮ್ಮ ಕೆಲಸದಿಂದ ಎದೆ ಒಡೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಬೇರೆ ಎಲ್ಲಿಲ್ಲದ ರೋಗ ನಿಮಗೆ ನನ್ನ ಕ್ಷೇತ್ರದಲ್ಲೆ ಇದೆ ಸಭೆಯಲ್ಲಿಯೇ ತಲೆ ಚಚ್ಚಿಕೊಂಡಿದ್ದಾರೆ. ಅಲ್ಲದೆ ಇದೇ ವೇಳೆ ತಪ್ಪು ಮಾಹಿತಿ ಕೊಟ್ಟ ಅಧಿಕಾರಿಗೆ ಜಿಟಿಡಿ ಸಭೆಯಲ್ಲಿ ತರಾಟೆ ತೆಗೆದುಕೊಂಡಿದ್ದಾರೆ. ಮೇ ವರೆಗೆ ಟ್ಯಾಂಕರ್ ಬಿಲ್ ಆಗಿದ್ಯಾ? ಅದನ್ನು ನೀನು ನನಗೆ ತೋರಿಸಿದ್ದೀಯಾ?. ನೀನು ಬಿಲ್ ಕ್ಲಿಯರ್ ಮಾಡದಿದ್ರೆ ಸಸ್ಪೆಂಡ್ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನಿಮ್ಮ ಯೋಗ್ಯತೆಗೆ 30 ಕುರ್ಚಿ ಹಾಕಕ್ಕೆ ಆಗಲ್ವಾ – ಕ್ಯೂ ನಿಂತಿದ್ದ ಗರ್ಭಿಣಿಯರನ್ನ ನೋಡಿ ಸಚಿವರ ತರಾಟೆ

Comments

Leave a Reply

Your email address will not be published. Required fields are marked *