ಮೇಕೆದಾಟುವಿನಿಂದಾಗಿ ಮುಳುಗುತ್ತಾ ಮುತ್ತತ್ತಿ- ಆಂಜನೇಯನ ಕಾಪಾಡ್ತಾರಾ ಟ್ರಬಲ್ ಶೂಟರ್?

ಬೆಂಗಳೂರು/ಮಂಡ್ಯ: ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ರಾಮಯಣದಲ್ಲಿ ಮುತ್ತತ್ತಿಯ ಬಗ್ಗೆ ಉಲ್ಲೇಖವಿರುವ, ಐತಿಹಾಸಿಕ ಪ್ರಸಿದ್ಧ ಮುತ್ತತ್ತಿ ಕೂಡ ಮುಳುಗಡೆಯಾಗುತ್ತದೆ ಅನ್ನೋ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

ಮೇಕೆದಾಟು ಕನ್ನಡಿಗರ ಕನಸು ಸರ್ಕಾರದ ಮಹತ್ವಾಂಕ್ಷಿ ಯೋಜನೆಯಾಗಿದೆ. ಆದ್ರೆ ಈ ಕನಸಿನ ಪ್ರಾರಂಭದಲ್ಲೇ ಸಣ್ಣ ತೊಡಕೊಂದು ಎದುರಾಗಿದೆ. ಅಣೆಕಟ್ಟು ಕಟ್ಟುವ ಸಂದರ್ಭದಲ್ಲಿ ನಾಲ್ಕು ಹಳ್ಳಿ ಮುಳುಗಡೆಯಾಗುವ ಭೀತಿಯಲ್ಲಿದ್ದು ಅದ್ರಲ್ಲಿ ಡಾ. ರಾಜ್ ಆರಾಧ್ಯ ಸ್ಥಳ ಮಳವಳ್ಳಿಯ ಮುತ್ತತ್ತಿಯೂ ಸೇರಲಿದ್ಯಾ ಅನ್ನುವ ಅನುಮಾನ ಮೂಡಿದೆ. ಸೀತೆಯ ಮೂಗುತಿಯನ್ನು ಕಾವೇರಿ ನದಿಗೆ ಹಾರಿ ಹುಡುಕಿಕೊಟ್ಟ ಆಂಜನೇಯನ ಸ್ಥಳ ಮಹಿಮೆ ಇರುವ ಸ್ಥಳ ಏನಾಗಲಿದೆ ಅನ್ನುವ ಪ್ರಶ್ನೆ ಈಗ ಎದುರಾಗಿದೆ.

ಪ್ರವಾಸಿ ತಾಣಗಳನ್ನು ಹಾಗೆಯೇ ಉಳಿಸಿಕೊಳ್ಳುತ್ತೇವೆ. ಮುತ್ತತ್ತಿ ಬಗ್ಗೆ ಕೇಳಿದ್ರೆ ಜನ ತ್ಯಾಗಕ್ಕೆ ಸಿದ್ಧರಾಗಿರಬೇಕು. ಅಭಿವೃದ್ಧಿ ಕೆಲಸಕ್ಕೆ ಸಹಕಾರ ಕೊಡಬೇಕು ಅಂತ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದರು.

ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿಕೆ ಕೊಟ್ಟಿರುವ ಡಿಕೆಶಿ ಆಂಜನೇಯನಿಗೆ ಕೈ ಕೊಡ್ತಾರಾ ಅಥವಾ ಮುತ್ತತ್ತಿನಾ ಉಳಿಸ್ತಾರ ಅನ್ನೋದು ಕಾದು ನೋಡಬೇಕಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *