ಸಿದ್ದರಾಮಯ್ಯ ಹಿಂದೆ ನಾನೇ ಇದ್ದೀನಿ: ಡಿ.ಕೆ ಶಿವಕುಮಾರ್

ರಾಯಚೂರು: ನಾನೇನಾದರೂ ಆಗಬೇಕಲ್ವಾ, ಹೊರಗಡೆಯಿಂದ ಬಂದವರಿಗೆಲ್ಲ ಸಹಾಯ ಮಾಡಿದ್ದೀನಿ. ಸಿಎಂ ಸಿದ್ದರಾಮಯ್ಯನವರದ್ದು ಮುಗಿಯಲಿ ಅವರ ಹಿಂದೆ ನಾನಿದ್ದೇನೆ ಎಂದು ಸಿಎಂ ಆಗುವ ಆಸೆಯನ್ನ ಇಂಧನ ಸಚಿವ ಡಿ.ಕೆ ಶಿವಕುಮಾರ್ ವ್ಯಕ್ತಪಡಿಸಿದ್ದಾರೆ.

ರಾಮನಗರ ತಾಲೂಕಿನ ಬಿಡದಿಯ ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್ ಸಿ ಬಾಲಕೃಷ್ಣ ಪರವಾಗಿ ಪ್ರಚಾರ ನಡೆಸಿದ ವೇಳೆ ಮಾತನಾಡಿದ ಅವರು, 45 ಸ್ಥಾನ ಪಡೆದಿರುವ ಬಿಜೆಪಿ 150 ಸ್ಥಾನ ಪಡೆಯುವುದಾಗಿ ಹೇಳುತ್ತಿದ್ದಾರೆ. ಆದರೆ 30 ಸ್ಥಾನ ಪಡೆದಿರುವ ಜೆಡಿಎಸ್ ಸಹ 115 ಸ್ಥಾನ ಗಳಿಸುವುದಾಗಿ ಹೇಳುತ್ತಿದೆ. ತಾವು ಪ್ರವಾಸ ಮಾಡಿದ್ದು, ಜೆಡಿಎಸ್ 30 ರಲ್ಲಿ 10 ಸ್ಥಾನ ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಶಿಡ್ಲಘಟ್ಟ, ದೇವನಹಳ್ಳಿ, ಮಾಲೂರು, ಕೆಆರ್ ಪೇಟೆನಲ್ಲಿ ಗೆಲ್ಲುವುದಿಲ್ಲ. ಅಲ್ಲೂ ಸಿ ಫಾರಂ, ಬಿ ಫಾರಂ ಗೊಂದಲ ಇದೆ. ಅಲ್ಲದೇ ಎಚ್‍ಡಿಕೆ ಮುಖ್ಯಮಂತ್ರಿ ಆಗುತ್ತೀನಿ ಅಂದ್ರೆ ಎಂಎಲ್‍ಎ ಗಳು ಬೇಕಲ್ವಾ. ಎಚ್.ಡಿ ಕುಮಾರಸ್ವಾಮಿಯವರನ್ನ ಎಂಪಿ ಮಾಡಿದ್ದೀರಿ, ಸಿಎಂ ಮಾಡಿದ್ದೀರಿ. ದೇವೇಗೌಡರನ್ನ ಸಿಎಂ ಮಾಡಿ, ಪ್ರಧಾನಿಯಾಗಿಯೂ ಮಾಡಿದ್ದೀರಿ. ಅಧಿಕಾರದಲ್ಲಿದ್ದಾಗ ಏನಾದರೂ ಶಾಶ್ವತವಾಗಿರುವಂತಹದ್ದು ಮಾಡಬೇಕಲ್ವಾ ಎಂದ್ರು.

ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ರನ್ನ ಗಂಡು ಮಾಡಿದ್ದು ನಾನು, ನನ್ನ ಸಹೋದರ ಸುರೇಶ್. ನೂರು ಮಂಜರನ್ನ ತಯಾರು ಮಾಡಬಹುದು. ಬಾಲಕೃಷ್ಣರಂತಹವರನ್ನ ಸೃಷ್ಟಿ ಮಾಡಲಾಗಲ್ಲ ಅವರು ರೆಡಿಮೆಡ್ ಗಂಡು. ಮಂಜು ಸ್ವಿಚ್ ಆಫ್ ಮಂಜು ಎಂದು ವ್ಯಂಗ್ಯವಾಡಿದರು.

Comments

Leave a Reply

Your email address will not be published. Required fields are marked *