ವಿಧಾನಸೌಧದ ಬಾಗಿಲು ಒಡೆದು ಒಳಗೆ ಕುಳಿತುಕೊಳ್ಳಲಿ – ಬಿಎಸ್‍ವೈಗೆ ಡಿಕೆಶಿ ಟಾಂಗ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಸಿಎಂ ಆಗಲು ತುದಿಗಾಲಲ್ಲಿ ನಿಂತಿದ್ದಾರೆ. ವಿಧಾನಸೌಧ ಬಾಗಿಲು ಒಡೆದು ಹೋಗಿ ಬೇಕಾದ್ರೆ ಅವರು ಒಳಗೆ ಕುಳಿತುಕೊಳ್ಳಲಿ ಎಂದು ಜಲಸಂಪನ್ಮೂಲ ಖಾತೆ ಸಚಿವ ಡಿ ಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

ನಾವು ಸನ್ಯಾಸಿಗಳಲ್ಲ ಎಂಬ ಯಡಿಯೂರಪ್ಪ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ದೆಹಲಿಯಲ್ಲಿ ಏನ್ ಮಾಡಿದ್ರು, ಮುಂಬೈಯಲ್ಲಿ ಏನ್ ಮಾಡಿದ್ರು ಅಂತ ನಮಗೆ ಗೊತ್ತಿಲ್ವೇ? ಪಾಪ ಅವರು ಮಾಡೋದು ಮಾಡಲಿ. ರಾಜಕೀಯದಲ್ಲಿ ಯಾರೂ ಗೂಟ ಹೊಡ್ಕೊಂಡು ಒಂದೇ ಕಡೆ ಕೂರಕ್ಕಾಗಲ್ಲ ಎಂದು ಬಿಜೆಪಿಗೆ ಡಿಕೆಶಿ ತಿರುಗೇಟು ಕೊಟ್ಟರು.

ಇದೇ ವೇಳೆ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎನ್ನುವ ಪ್ರಶ್ನೆಗೆ ನನಗೆ ಗೊತ್ತಿಲ್ಲ ಎಂದ ಡಿಕೆಶಿ ಆ ವಿಚಾರ ಯಡಿಯೂರಪ್ಪನವರಿಗೆ ಗೊತ್ತಿರಬಹುದೆಂದು ಎಂದು ಹೇಳಿ ಮತ್ತೊಮ್ಮೆ ಕೆಣಕಿದರು.

ಇದೇ ಸಂದರ್ಭದಲ್ಲಿ ಮಾತಾಡಿದ ಡಿಸಿಎಂ ಜಿ.ಪರಮೇಶ್ವರ್, ಈ ಹಿಂದೆ ಬಿಜೆಪಿಯವರು ಕುದುರೆ ವ್ಯಾಪಾರ ಮಾಡಿ ಸಕ್ಸಸ್ ಆಗಿದ್ದರು. ಅದರಲ್ಲಿ ಅವರು ನಿಸ್ಸೀಮರು. ಈಗ ಮತ್ತೆ ಶುರುವಿಟ್ಟುಕೊಂಡಿದ್ದಾರೆ. ಆದರೆ ಇದ್ರಲ್ಲಿ ಬಿಜೆಪಿಯವರು ಸಫಲವಾಗಲ್ಲ ಎಂದು ಹೇಳಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv  

Comments

Leave a Reply

Your email address will not be published. Required fields are marked *