ಸಚಿವ ಅನಂತ್ ಕುಮಾರ್ ಹೆಗ್ಡೆ ಕಾರ್ ಅಪಘಾತ- ಸಿಎಂಗೆ ಸಂಸದ ಪ್ರತಾಪ್ ಸಿಂಹ ಸವಾಲ್

ಬೆಂಗಳೂರು: ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಕಾರ್ ಅಪಘಾತವಾಗಿರುವ ಹಿನ್ನೆಲೆಯಲ್ಲಿ ಇದೀಗ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿಯವರಿಗೆ ಸವಾಲೆಸೆದಿದ್ದಾರೆ.

ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ನೀವು ಅನಂತ್‍ಕುಮಾರ್ ಹೆಗ್ಡೆಯವರನ್ನು ರಾಜಕೀಯವಾಗಿ ಎದುರಿಸಿ. ಅದನ್ನ ಬಿಟ್ಟು ಅವರನ್ನ ಕೊಲೆ ಮಾಡಿಸುವ ಪ್ರಯತ್ನ ಮಾಡಬೇಡಿ. ಆ ರೀತಿಯ ಪ್ರಯತ್ನ ಮಾಡಿದ್ರೆ ನಾವು ಸುಮ್ಮನಿರೋಲ್ಲ ಅಂತ ಹೇಳಿ ಸಿದ್ದರಾಮಯ್ಯ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಸಿದ್ದರಾಮಯ್ಯನವರೇ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ. ಆ ಹೋರಾಟದ ವೇಳೆ ನಿಮ್ಮನ್ನ ಯಾರು ಕಾಪಾಡುವುದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹತ್ಯೆಗೆ ಯತ್ನ !

ಸದ್ಯ ಚಾಮುಂಡೇಶ್ವರಿ ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ ಅವರು ಮೂರನೇ ಹಂತದಲ್ಲಿ ಏಳನೇ ದಿನ ಪ್ರಚಾರ ಕೈಗೊಳ್ಳಲಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ 20 ಹಳ್ಳಿಗಳಲ್ಲಿ ಪ್ರಚಾರ ನಡೆಸಲಿರುವ ಸಿದ್ದರಾಮಯ್ಯ ಜಟ್ಟಿಹುಂಡಿ, ಬೀರಿಹುಂಡಿ, ಶೆಟ್ಟನಾಯಕಹಳ್ಳಿ, ಗೋಹಳ್ಳಿ, ಕುಮಾರಬೀಡು ಮಾವಹಳ್ಳಿ, ನುಗ್ಗಹಳ್ಳಿ, ಡಿಎಂಜಿ ಹಳ್ಳಿ, ಮಾಣಿಕ್ಯಪುರ, ದೊಡ್ಡಟ್ಟಿಹುಂಡಿ, ಕಮ್ಮರಹಳ್ಳಿ, ಮರಯ್ಯನಹುಂಡಿ, ಕಟ್ಟೆಹುಂಡಿ, ನಾಗವಾಲ.ಸೀಗಳ್ಳಿ, ಬೊಮ್ಮನಹಳ್ಳಿ, ಚಿಕ್ಕೆಗೌಡನಕೊಪ್ಪಲು, ಹಳೆಗೌಡನಕೊಪ್ಪಲು, ಲಿಂಗದೇವರುಕೊಪ್ಪಲು, ಇಲವಾಲ ಗ್ರಾಮಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.

ಮಂಗಳವಾರ ಇಡೀ ವರುಣಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ, ಇಂದು ಮತ್ತೆ ಸ್ವ-ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ನಾಳೆಯೂ ಮೈಸೂರಿನಲ್ಲೇ ಸಿಎಂ ಅವರು ಪ್ರಚಾರ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *