ತಿಪ್ಪೆಗುಂಡಿಯಲ್ಲಿ ಹುಲ್ಲು, ಪೇಪರ್, ಕಸ-ಕಡ್ಡಿಗಳನ್ನ ತಿನ್ತಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ

ತುಮಕೂರು: ಅನ್ನ ಆಹಾರ ಇಲ್ಲದೆ ತಿಪ್ಪೆಗುಂಡಿಯಲ್ಲಿ ಬಿದ್ದು ಹುಲ್ಲು, ಪೇಪರ್, ಕಸ-ಕಡ್ಡಿಗಳನ್ನ ತಿನ್ನುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಆಟೋ ಚಾಲಕರೊಬ್ಬರು ರಕ್ಷಣೆ ಮಾಡಿದ್ದಾರೆ.

ತುಮಕೂರು ನಗರದ ಪ್ರವಾಸಿ ಮಂದಿರದ ಬಳಿ ರಸ್ತೆ ಪಕ್ಕದಲ್ಲಿರುವ ಕಸದ ಗುಂಡಿಯಲ್ಲಿ ಮಾನಸಿಕ ಅಸ್ವಸ್ಥ ಬಿದ್ದು ವಿಲವಿಲ ಒದ್ದಾಡುತ್ತಿದ್ದನು. ಹೊಟ್ಟೆಗೆ ಆಹಾರ ಇಲ್ಲದೆ ದೇಹ ಕೃಶವಾದ ಆತ ಹುಲ್ಲು, ಮಣ್ಣು, ಕಸ ಕಡ್ಡಿಗಳನ್ನು ತಿನ್ನುವ ದೃಶ್ಯ ನಿಜಕ್ಕೂ ಕರುಳು ಚುರ್ರ್ ಅನ್ನಿಸುತ್ತಿತ್ತು. ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ತಿಪ್ಪೆಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಯಾರೊಬ್ಬರೂ ಅವನನ್ನು ರಕ್ಷಿಸುವ ಅಥವಾ ಆಹಾರ ನೀಡುವ ಔದಾರ್ಯ ತೋರಿಲ್ಲ.

ಸಂಜೆ ವೇಳೆಗೆ ಆಟೋ ಚಾಲಕ ನವೀನ್, ಮಾನಸಿಕ ಅಸ್ವಸ್ಥನಿಗೆ ಆಹಾರ ನೀಡಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಅಸ್ವಸ್ಥನ ಹೆಸರು ಮೋಹನ್ ಎಂದು ತಿಳಿದು ಬಂದಿದ್ದು, ವಿಳಾಸ ತಿಳಿದುಬಂದಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *