ಮೆಡಿಕಲ್ ಎಮರ್ಜೆನ್ಸಿ: ಗುರುವಾರದಿಂದ ಆಸ್ಪತ್ರೆಗಳಲ್ಲಿ ಯಾವ ಚಿಕಿತ್ಸೆ ಸಿಗುತ್ತೆ? ಯಾವುದು ಸಿಗಲ್ಲ?

ಬೆಂಗಳೂರು: ರಾಜ್ಯದಲ್ಲಿ ಈಗ ಆರೋಗ್ಯ ಎಮರ್ಜೆನ್ಸಿ ನಿರ್ಮಾಣವಾಗಿದೆ. ಸರ್ಕಾರದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ(ಕೆಪಿಎಂಇ) ವೈದ್ಯರ ಪ್ರತಿರೋಧ ಗುರುವಾರದಿಂದ ಮತ್ತಷ್ಟು ಜೋರಾಗಲಿದೆ. ಅನಿರ್ಧಿಷ್ಟಾವಧಿವರೆಗೆ ಎಲ್ಲಾ ಖಾಸಗಿ ಆಸ್ಪತ್ರೆಯ ಒಪಿಡಿಗಳು ಕ್ಲೋಸ್ ಆಗಲಿದ್ದು, ಜನರಿಗೆ ಚಿಕಿತ್ಸೆ ಸಿಗುವುದಿಲ್ಲ. ಇದೆಲ್ಲ ಎಲೆಕ್ಷನ್ ಗಿಮಿಕ್ ಅಂತಾ ವೈದ್ಯರು ರಮೇಶ್ ಕುಮಾರ್ ರತ್ತ ಬೊಟ್ಟು ಮಾಡಿದ್ರೆ, ಸಚಿವರು ಪ್ರಾಣ ಹೋದ್ರು ಕಾಯ್ದೆ ಮಂಡಿಸುತ್ತೇನೆ ಅಂತಾ ಪಟ್ಟು ಹಿಡಿದಿದ್ದಾರೆ.

ಇಂದು ತುರ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖಾಸಗಿ ಆಸ್ಪತ್ರೆಗಳ ವೈದ್ಯರು ಸರ್ಕಾರ ವಿಧೇಯಕ ವಾಪಸು ಪಡೆಯುವವರೆಗೆ ಬೆಂಗಳೂರಿನಲ್ಲಿ ಸುಮಾರು ಆರು ಸಾವಿರ ಖಾಸಗಿ ಆಸ್ಪತ್ರೆಯಲ್ಲಿ ನಾಳೆ ಬೆಳಗ್ಗೆ ಎಂಟು ಗಂಟೆಯಿಂದ ತುರ್ತು ಚಿಕಿತ್ಸೆ ಹೊರತುಪಡಿಸಿ ಎಲ್ಲಾ ಸೇವೆಯನ್ನು ಸ್ಥಗಿತಗೊಳಿಸಲಿದ್ದೇವೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಸಚಿವರ ವಿರುದ್ಧ ಕಿಡಿಕಾರಿರುವ ವೈದ್ಯರು ರಮೇಶ್ ಕುಮಾರ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಹಠಮಾರಿ ಧೋರಣೆ ಮಾಡಿದ್ದಾರೆ ಜನ್ರ ಸಾವಿನ ಹೊಣೆ ಅವ್ರೇ ವಹಿಸಿಕೊಳ್ಳಲಿ ಅಂತಾ ಹೇಳಿದ್ದಾರೆ.

ಫನಾ ಕಾರ್ಯದರ್ಶಿ, ಡಾ ರವೀಂದ್ರ ಅವರು ಹೊಸ ಬಾಂಬ್ ಹಾಕಿದ್ದು ಸಚಿವ ರಮೇಶ್ ಕುಮಾರ್ ಈ ಮಸೂದೆ ಜಾರಿಗೆ ಚುನಾವಣೆ ಕಾರಣ. ಇದಕ್ಕೆ ತರಾತುರಿಯಲ್ಲಿ ಮಸೂದೆ ಮಂಡನೆಗೆ ಹೊರಟಿದ್ದಾರೆ ಇದನ್ನು ಖುದ್ದು ನನ್ನ ಬಳಿಯೇ ಹೇಳಿಕೊಂಡಿದ್ದಾರೆ ಎಂದರು.

ಸರ್ಕಾರ ಮೊದಲು ಆರು ಕೋಟಿ ಕನ್ನಡಿಗರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಭರವಸೆ ನೀಡಲಿ ಎಂದು ಆಗ್ರಹಿಸಿದರು.


 

Comments

Leave a Reply

Your email address will not be published. Required fields are marked *