ನಿವೇನ್ರೀ ಯಾವಾಗ್ಲೂ ಸಿದ್ದರಾಮಯ್ಯ, ಶೋಭಾ ಬಗ್ಗೆ ಕೇಳ್ತೀರಾ – ಮಾಧ್ಯಮಗಳ ವಿರುದ್ಧ ಎಂಬಿಪಿ ಗರಂ

ಕಲಬುರಗಿ: ನಿವೇನ್ರೀ ಯಾವಾಗಲೂ ಸಿದ್ದರಾಮಯ್ಯ ಬಗ್ಗೆ ಶೋಭಾ ಬಗ್ಗೆ ಕೇಳುತ್ತೀರಿ ಎಂದು ಪ್ರಶ್ನಿಸಿ ಮಾಧ್ಯಮಗಳ ವಿರುದ್ಧ ಗೃಹ ಸಚಿವ ಎಂಬಿ ಪಾಟೀಲ್ ಗರಂ ಆಗಿದ್ದಾರೆ.

ಪ್ರಧಾನಿ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಸಾಕಷ್ಟು ಲೂಟಿಯಾಗಿದೆ. ತಮ್ಮ ಹತ್ತಿರದವರಿಗೆ ಮೋದಿ ಅನೂಕುಲ ಮಾಡಿಕೊಟ್ಟಿದ್ದಾರೆ. ಇದರಿಂದ ರೈತರಿಗೆ ಬೆಳೆ ಪರಿಹಾರ ಸೇರಿದಂತೆ ಅನೇಕ ಯೋಜನೆಗಳು ಮುಟ್ಟಿಲ್ಲ. ಮಾಧ್ಯಮಗಳು ರೈತರ ಪರವಾಗಿದ್ದೀವಿ ಅಂತಿರಲ್ವ? ರೈತರಿಗೆ ಸಾಕಷ್ಟು ಅನ್ಯಾಯವಾಗ್ತಿದೆ. ಇದನ್ನು ತೋರಿಸಿ ಎಂದು ಸಿಟ್ಟಿನಿಂದ ಹೇಳಿದರು.

ಇಲ್ಲ ಸರ್ ಈ ಬಗ್ಗೆ ನಮ್ಮ ಟಿವಿಯಲ್ಲಿ ಸುದ್ದಿ ಪ್ರಸಾರ ಮಾಡಿದ್ದೀವಿ. ಆದರೆ ನೀವೇ ಅದರ ಹೋರಾಟ ಮಾಡಿಲ್ಲ ಎಂಬ ಪರ್ತಕರ್ತರ ಮರು ಪ್ರಶ್ನೆಗೆ, ಆಯ್ತು ಒಳ್ಳೆಯದು. ಬರದ ನೆರವಿಗೆ ಕೇಂದ್ರ ಬಂದಿಲ್ಲ, ಇದನ್ನು ಮೊದಲು ಹೈಲೆಟ್ ಮಾಡಿ. ಅದು ಬಿಟ್ಟು ಶೋಭಾ ಬಗ್ಗೆ, ರೇಣುಕಾಚಾರ್ಯ ಬಗ್ಗೆ ಕೇಳುತ್ತಿದ್ದಿರಲ್ಲ. ಬಿಡ್ರಿ ಇದೆಲ್ಲ. ನೀವು ಮಾಧ್ಯಮದವರು ಇನ್ನು ಬಹಳ ಎತ್ತರಕ್ಕೆ ಬೆಳೆಯಬೇಕು ರೀ ಎಂದು ಹೇಳಿ ಹೊರಟುಹೋದರು.

Comments

Leave a Reply

Your email address will not be published. Required fields are marked *