ಭಾರತೀಯ ಸೈನ್ಯಕ್ಕೆ ಸೆಲ್ಯೂಟ್ ಹೊಡೆದು ಕಣ್ಣೀರಿಟ್ಟ ಕಲಾವತಿ

ಮಂಡ್ಯ: ಭಾರತೀಯ ವಾಯುಸೇನೆಯು ನಮ್ಮ ಯೋಧರನ್ನು ಮೋಸದಲ್ಲಿ ಕೊಂದ ಉಗ್ರರ ಕೇಂದ್ರಗಳನ್ನು ಧ್ವಂಸ ಮಾಡಿದ ಭಾರತೀಯ ಸೈನ್ಯಕ್ಕೆ ಹುತಾತ್ಮ ಗುರು ಪತ್ನಿ ಕಲಾವತಿ ಅವರು ಸೆಲ್ಯೂಟ್ ಹೊಡೆದಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರು ಪತ್ನಿ ಕಲಾವತಿ, ಮೊದಲಿಗೆ ನಾನು ಭಾರತೀಯ ಸೈನ್ಯಕ್ಕೆ ಸೆಲ್ಯೂಟ್ ಹೊಡೆಯುತ್ತೇನೆ ಎಂದು ಸೆಲ್ಯೂಟ್ ಮಾಡಿದ್ದಾರೆ. ಉಗ್ರರು ಎಲ್ಲೆಲ್ಲಿ ಅಡಗಿದ್ದಾರೆ ತಿಳಿದುಕೊಂಡು ಅವರನ್ನು ಬಿಡಬಾರದು. ನಮ್ಮ ಸರ್ಕಾರಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: 21 ನಿಮಿಷದಲ್ಲಿ 3 ಉಗ್ರರ ತರಬೇತಿ ಶಿಬಿರಗಳು ಮಟಾಷ್

ನಮ್ಮ ಸೈನಿಕರಿಗೆ ಇಷ್ಟನ್ನು ಧೈರ್ಯ, ಶಕ್ತಿ ಕೊಡಲಿ. ಜೊತೆಗೆ ಅವರಿಗೆ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ. ಸೈನಿಕರೆಲ್ಲರೂ ಚೆನ್ನಾಗಿರಲಿ. ನಮ್ಮ ಸೈನಿಕರ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ಅವರಿಗೆ ಗೌರವ ಕೊಡುತ್ತೇನೆ. ನಾನು ಇಂದು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಪತಿಯನ್ನು ನೆನಪಿಸಿಕೊಂಡು ಕಣ್ಣೀರು ಹಾಕುತ್ತಿದ್ದಾರೆ.

ಇಂದು ಹುತಾತ್ಮ ಗುರು ಅವರು ಹನ್ನೊಂದು ದಿನದ ತಿಥಿ ಕಾರ್ಯ ನಡೆಯಲಿದ್ದು, ಈಗಾಗಲೇ ಊಟ, ಶಾಮಿಯಾನ, ಸಮಾಧಿಯ ಅಲಂಕಾರದ ಕಾರ್ಯವೂ ನಡೆಯುತ್ತಿದೆ. ಯೋಧ ಗುರು ಅವರ ತಿಥಿ ಕಾರ್ಯದ ಸಂಪೂರ್ಣ ಜವಬ್ದಾರಿಯನ್ನು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು ವಹಿಸಿಕೊಂಡಿದ್ದಾರೆ.

https://www.youtube.com/watch?v=6FFjguZBwiI

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *