ಮಣಿಪಾಲ್ ಹೆರಿಟೇಜ್ ಜನಕ ವಿಜಯನಾಥ್ ಶೆಣೈ ಇನ್ನಿಲ್ಲ

ಉಡುಪಿ: ಮಣಿಪಾಲ್ ಹೆರಿಟೇಜ್ ವಿಲೇಜ್ ನಿರ್ಮಾತೃ ವಿಜಯ್‍ನಾಥ್ ಶೆಣೈ (83) ಗುರುವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಸಿಂಡಿಕೇಟ್ ಬ್ಯಾಂಕ್‍ನ ನಿವೃತ್ತ ಉದ್ಯೋಗಿಯಾಗಿದ್ದ ಅವರು ಹಸ್ತ ಶಿಲ್ಪ ಟ್ರಸ್ಟ್ ಆರಂಭಿಸಿದ್ದರು. ತಮ್ಮ ಟ್ರಸ್ಟ್ ಮೂಲಕ ಮಣಿಪಾಲ್ ಹೆರಿಟೇಜ್ ನಿರ್ಮಾಣ ಮಾಡಿದ್ದರು.

ತಮ್ಮ ಬಿಡುವಿನ ವೇಳೆಯಲ್ಲಿ ಐತಿಹಾಸಿಕ ಪ್ರದೇಶಗಳನ್ನು ವೀಕ್ಷಿಸಿ, ಅಂತಹುದೇ ಮಾದರಿ ಶಿಲಾ ವಿನ್ಯಾಸವನ್ನು ಮಣಿಪಾಲ್ ಶೈಲಿಯಲ್ಲಿ ನಿರ್ಮಾಣ ಮಾಡಿದ್ದರು. ಇದಕ್ಕಾಗಿ 6 ಎಕರೆ ವಿಸ್ತೀರ್ಣದಲ್ಲಿ ಸುಂದರ ಹಾಗೂ ಭವ್ಯವಾದ ಹೆರಿಟೇಜ್‍ನ್ನು ನಿರ್ಮಾಣ ಮಾಡಿದ್ದರು.

ದೇಶದಲ್ಲಿ ಪಾರಂಪರಿಕ ಶೈಲಿಯ ಮನೆಗಳ ವಿನ್ಯಾಸಗಳು ಆಧುನಿಕ ಜಗತ್ತಿನಲ್ಲಿ ಕಣ್ಮರೆಯಾಗುವ ವೇಳೆಯಲ್ಲಿ ದೇಶಿ ಶೈಲಿಯ ಮನೆಗಳ ನಿರ್ಮಾಣ ಮಾಡಿ ಅವುಗಳ ಉಳಿವಿಗೆ ಕಾರಣವಾಗಿದ್ದರು. ವಿಜಯನಾಥ್ ಶೆಣೈ ಅವರ ಪರಿಶ್ರಮದ ಫಲವಾಗಿ ಮಣಿಪಾಲ್ ಹೆರಿಟೇಜ್‍ನಲ್ಲಿ 30 ಕ್ಕೂ ವಿವಿಧ ಬಗೆಯ ವಾಸ್ತು ಶೈಲಿಯನ್ನು ಕಾಣಬಹುದು. ವಿಜಯನಾಥ್ ಶೆಣೈ ಪತ್ನಿ, ಪುತ್ರಿ, ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.

 

Comments

Leave a Reply

Your email address will not be published. Required fields are marked *