ನಂದಿಗಿರಿಧಾಮದಲ್ಲಿ ಪ್ರವಾಸಿಗರ ಮನಸೆಳೆದ ಮಾವು ಮೇಳ

– ನಿಮಿಷಗಳಲ್ಲೇ ಮಾವು ತಿಂದು ಮುಗಿಸಿದ ಮಹಿಳೆಯರು

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ, ಪ್ರವಾಸಿಗರಿಗೆ ಮಾವು ಮಾರಾಟ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ವಿಶೇಷ ಮಾವು ಮೇಳ ಆಯೋಜಿಸಿದೆ.

ಮಾವು ಬೆಳೆಗಾರ ರೈತರಿಂದ ನೇರವಾಗಿ ಪ್ರವಾಸಿಗರಿಗೆ ಮಾವು ಮಾರಾಟ ಮಾಡುವ ಉದ್ದೇಶದ ಮಾವು ಮೇಳಕ್ಕೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಚಾಲನೆ ನೀಡಿದರು. ಮೇಳದಲ್ಲಿ ಪ್ರಮುಖವಾಗಿ ಮಲ್ಲಿಕಾ, ಮಲಗೋವಾ, ಬಾದಾಮಿ, ರಸಪೂರಿ ಸೇರಿದಂತೆ ವಿವಿಧ ತರಹವೇವಾರಿ ಮಾವುಗಳ ಪ್ರದರ್ಶನ ಮಾಡಲಾಗಿದ್ದು. ತರಹೇವಾರಿ ಮಾವು ಕಂಡ ಪ್ರವಾಸಿಗರು ಮಾವು ಸವಿದು ಫುಲ್ ಖುಷ್ ಆಗಿದ್ದಾರೆ.

ಪ್ರವಾಸಿ ತಾಣದಲ್ಲಿ ಬಾಯಿಯಲ್ಲಿ ನೀರೂರಿಸುವ ಮಾವು ಕಂಡ ಪ್ರವಾಸಿಗರು, ರಿಯಾಯಿತಿ ದರದಲ್ಲಿ ಮಾವಿನ ಹಣ್ಣುಗಳನ್ನು ಖರೀದಿಸಿದರು. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಈ ಮಾವು ಮೇಳ ನಡೆಯಲಿದ್ದು, ಪ್ರವಾಸಿಗರು ಮಾವುಗಳನ್ನು ನೇರವಾಗಿ ರೈತರಿಂದ ಖರೀದಿಸಿ ರೈತರಿಗೆ ಉತ್ತೇಜನ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿಕೊಂಡರು.

ಮೇಳದಲ್ಲಿ ಮಾವು ತಿನ್ನೋ ಸ್ಫರ್ಧೆಯನ್ನ ಮಹಿಳೆಯರಿಗಂತಲೇ ವಿಶೇಷವಾಗಿ ಆಯೋಜನೆ ಮಾಡಲಾಗಿತ್ತು. ನಿಗದಿತ ಸಮಯದಲ್ಲಿ ಅತಿ ಹೆಚ್ಚು ಮಾವಿನ ಹಣ್ಣುಗಳನ್ನ ತಿಂದವರಿಗೆ 8 ಕೆಜಿಯ ಮಾವಿನ ಹಣ್ಣಿನ ಬಾಕ್ಸ್ ಬಹುಮಾನವಾಗಿ ನೀಡಲಾಯಿತು. ಈ ವೇಳೆ ಮಾವು ತಿನ್ನೋ ಸ್ಫರ್ಧೆಯಲ್ಲಿ ಭಾಗವಹಿಸಿದ ಪ್ರವಾಸಿಗರು ನಾ ಮುಂದು ತಾ ಮುಂದು ಅಂತ ಮಾವು ಸವಿದರು.

Comments

Leave a Reply

Your email address will not be published. Required fields are marked *