ದುಡ್ಡು ಅಲ್ಲ, ವ್ಯಕ್ತಿ ನೋಡಿಯೇ ವೋಟ್ ಹಾಕೋದು – ಮಂಡ್ಯದ ವ್ಯಕ್ತಿಯಿಂದ ಸಿಎಂಗೆ ಮನವಿ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಮದ್ದೂರು ತಾಲೂಕು ವಳಗೆರೆದೊಡ್ಡಿ ಗ್ರಾಮದ ವ್ಯಕ್ತಿಯಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.

ಆಟೋ ಸೋಮಣ್ಣ ಎಂಬವರು ಎಚ್ ಡಿಕೆಗೆ ಮನವಿ ಮಾಡಿದ್ದಾರೆ. ವಿಡಿಯೋ ಮಾಡುವ ಮೂಲಕ ಸೋಮಣ್ಣ ಅವರು ಒಂದು ಬಾರಿ ಅಕ್ಕನಿಗೆ ಅಂದರೆ ಸುಮಲತಾ ಅವರಿಗೆ ಟಿಕೆಟ್ ಕೊಡಿ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನ್ ಹೇಳಿದ್ದಾರೆ?
ನಮಸ್ಕಾರ ಕುಮಾರಣ್ಣ ಇದೊಂದು ಸಾರಿ ಅಕ್ಕನಿಗೆ ಚಾನ್ಸ್ ಕೊಡಿ. ನಿಮ್ಮ ಮಗ ನಿಖಿಲ್ ಕುಮಾರಸ್ವಾಮಿ ಟಿವಿಯಲ್ಲಿ ಮಾತಾಡಿದ್ದನ್ನು ನಾನು ನೋಡಿದ್ದೇನೆ. 5 ಎಕರೆ ಇಲ್ಲದೆ ಹೋದರೆ, 50 ಎಕರೆ ತೆಗೆದುಕೊಳ್ಳಿ, ನಿಮ್ಮ ಹತ್ತಿರ ಹಣ, ಆಸ್ತಿ ಅಧಿಕಾರ ಇದೆ. ಅಣ್ಣ ಇರುವವರೆಗೂ ಒಂಥರಾ ಇದ್ದು, ಅವರು ಅಗಲಿದ ಮೇಲೆ ಈ ರೀತಿ ಮಾಡಬಾರದು. ಇದು ಒಂದು ಸಲ ನನ್ನ ಮಾತಿಗೆ ಬೆಲೆ ಕೊಡಿ ಎಂದು ಹೇಳಿದ್ದಾರೆ.

ಅಂಬರೀಶಣ್ಣನ ಬೋರ್ಡ್ ಕಿತ್ತಾಕಿ ಎಂದು ಪೊಲೀಸರಿಗೆ ಮೆಸೇಜ್ ಬಂದಿದೆ ಎಂದು ಹೇಳುತ್ತಾರೆ. ಅವರು ಇದ್ದಾಗ ಒಂದು ರೀತಿ, ಇಲ್ಲದಾಗ ಒಂದು ರೀತಿಯಲ್ಲಿ ಅಧಿಕಾರ ಮಾಡೋದು ಒಳ್ಳೆಯದಲ್ಲ. ನಿಮಗೆ ಮಾತ್ರ ಮನೆಮಂದಿಯೆಲ್ಲ ಎಲೆಕ್ಷನ್‍ಗೆ ನಿಂತುಕೊಳ್ಳಬೇಕು. ಅವರೇನು ನಿಂತಕೊಳ್ಳುವುದು ಬೇಡವಾ ಎಂದು ಪ್ರಶ್ನಿಸಿದ್ದಾರೆ. ಈ ಬಾರಿ ಅವರಿಗೆ ಗೆಲ್ಲುವ ಅವಕಾಶ ಇದೆ. ನಾವೂ ರೈತರೇ ನಾವೂ, ದುಡ್ಡು ನೋಡಿ ವೋಟು ಹಾಕುವುದಿಲ್ಲ, ವ್ಯಕ್ತಿ ನೋಡಿಯೇ ವೋಟ್ ಹಾಕುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಜಮೀನು ಹಾಳಾದರೂ ಪರವಾಗಿಲ್ಲ ನಾವು ಅವರ ಪರ ಹೋಗಿ ಕೆಲಸ ಮಾಡುತ್ತೀವಿ. ಸುಮಲತಾ ಅಕ್ಕಾಗೆ ಇದೊಂದು ಸಾರಿ ಚಾನ್ಸ್ ಕೊಡಿ. ಒಂದು ವೇಳೆ ನೀವು ಟಿಕೆಟ್ ಕೊಟ್ಟಿಲ್ಲ ಎಂದರೆ ಅವರು ಪಕ್ಷೇತರರಾಗಿ ನಿಂತು ಗೆದ್ದೆ ಗೆಲ್ಲುತ್ತಾರೆ ಎಂದು ಎರಡು ನಿಮಿಷ ಐದು ಸೆಕೆಂಡ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *