ಬಿಎಸ್‍ವೈ ಮಂಡ್ಯದ ಗಂಡು 17 ಜನಕ್ಕೂ ಸಚಿವ ಸ್ಥಾನ ನೀಡ್ತಾರೆ – ಸಿ.ಎಸ್.ಪುಟ್ಟರಾಜು

ಮಂಡ್ಯ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಂಡ್ಯದ ಗಂಡು. ಅವರು ಕೊಟ್ಟ ಮಾತಿಗೆ ತಪ್ಪಲ್ಲ. ಎಲ್ಲಾ 17 ಜನರನ್ನು ಮಂತ್ರಿ ಮಾಡೇ ಮಾಡುತ್ತಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ವ್ಯಂಗ್ಯವಾಡಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಪುಟ್ಟರಾಜು, ಬಿಜೆಪಿಯಲ್ಲಿ ಗೆದ್ದ ಶಾಸಕರಿಗೆ ಮಾತ್ರ ಮಂತ್ರಿಸ್ಥಾನ ಸೋತವರಿಗೆ ಸಿಗಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಯಡಿಯೂರಪ್ಪ ಅವರಿಗೆ ನಾವು ಹಿಂದೆ ಅಧಿಕಾರ ಕೊಡದೇ ಮಾತಿಗೆ ತಪ್ಪಿದ್ದಾರೆಂದು ಜೆಡಿಎಸ್‍ನ ಟೀಕೆ ಮಾಡುತ್ತಿದ್ದರು. ಈಗ ಯಡಿಯೂರಪ್ಪ ಅವರು ಈ ರೀತಿಯ ಟೀಕೆ ಮಾಡಿಸಿಕೊಳ್ಳಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.

ಅವರು ನಮ್ಮ ಮಂಡ್ಯದ ಗಂಡು ಎಂದಿಗೂ ಮಾತಿಗೆ ತಪ್ಪಲ್ಲ. ಎಲ್ಲಾ 17 ಜನರಿಗೂ ಸಚಿವ ಸ್ಥಾನ ನೀಡುತ್ತಾರೆ. ಅವರು ಎಂದೂ ಸಹ ಮಾತಿಗೆ ತಪ್ಪಿಲ್ಲ. ಕೊಟ್ಟ ಮಾತಿನ ಹಾಗೆ ಯಡಿಯೂರಪ್ಪ ಅವರು ನಡೆದುಕೊಳ್ಳುತ್ತಾರೆ ಎಂದರು.

Comments

Leave a Reply

Your email address will not be published. Required fields are marked *