ಸಿಎಂಗೆ ರೇವಣ್ಣ ಶನಿಯಾಗಿದ್ದಾರೆ- ಬಾಲಕೃಷ್ಣ

ಮಂಡ್ಯ: ಮುಖ್ಯಮಂತ್ರಿಯವರಿಗೆ ರೇವಣ್ಣ ಶನಿಯಾಗಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಸಚಿವರನ್ನು ಶನಿ ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜೆಡಿಎಸ್ ಪಕ್ಷ ಬಿಟ್ಟಾಗ ರೇವಣ್ಣ, ಶನಿಗಳು ತೊಲಗಿದರು ಅಂದಿದ್ದರು. ಈಗ ಮುಖ್ಯಮಂತ್ರಿ ಅವರಿಗೆ ಯಾರು ಶನಿಯಾಗಿದ್ದಾರೆಂದು ಗೊತ್ತಾಗಿದೆ ಎಂದ ವ್ಯಂಗ್ಯವಾಡಿದರು.

ರೇವಣ್ಣ ಅವರು ತಮ್ಮ ಇಲಾಖೆ ಅಲ್ಲದೆ ಇತರ ಇಲಾಖೆಯ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ನಮ್ಮವರ ರಾಜೀನಾಮೆಗೆ ಇದು ಒಂದು ಕಾರಣ. ರೇವಣ್ಣ ಅವರಿಂದಾಗಿಯೇ ಸರ್ಕಾರ ಈಗ ಬೀಳುವ ಹಂತಕ್ಕೆ ಬಂದಿದೆ ಎಂದು ಅತೃಪ್ತ ಶಾಸಕರು ಈಗಾಗಲೇ ಬಹಿರಂಗ ಹೇಳಿಕೆ ನೀಡಿದ್ದಾರೆ.ಈ ಬೆನ್ನಲ್ಲೇ ಮೈತ್ರಿ ಸರ್ಕಾರದ ಪತನಕ್ಕೆ ರೇವಣ್ಣ ಅವರು ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಆದ್ದರಿಂದಲೇ ಮಾಜಿ ಶಾಸಕ ಬಾಲಕೃಷ್ಣ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿದೆ.

Comments

Leave a Reply

Your email address will not be published. Required fields are marked *