ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಷೇಧದ ವಿರುದ್ಧ ಪ್ರತಿಭಟನೆ

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಗೆ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಹೇರಿರುವ ಬೆನ್ನಲ್ಲೇ ಕಲ್ಲುಕುಟಿಕ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

ಬೇಬಿ ಬೆಟ್ಟದ ತಪ್ಪಲಿನ ಕಾವೇರಿ ಪುರ ಗ್ರಾಮದ ಬಳಿ ಕಲ್ಲು ಕುಟಿಕ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಗಣಿಗಾರಿಕೆ ನಿಷೇಧದಿಂದ ನಮ್ಮ ಕುಟುಂಬಗಳು ಬೀದಿಗೆ ಬರುತ್ತವೆ. ಜಿಲ್ಲಾಡಳಿತ ಗಣಿಗಾರಿಕೆ ನಿಷೇಧ ಮಾಡಬೇಕು ಎಂದರೆ ಬ್ಲಾಸ್ಟಿಂಗ್ ಹಾಗೂ ಕ್ರಷಿಂಗ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ಕೈಯಲ್ಲಿ ಕುಟ್ಟಿ ಗಣಿಗಾರಿಕೆ ಮಾಡುವುದನ್ನು ನಿಲ್ಲಿಸ ಬಾರದು.

ಇದರಿಂದ ಹಲವಾರು ಕುಟುಂಬಗಳು ಜೀವನ ಮಾಡುತ್ತಿವೆ. ಒಂದು ವೇಳೆ ಇದನ್ನು ನಿಷೇಧ ಮಾಡಿದರೆ ನೂರಾರು ಕುಟಂಬಗಳು ಬೀದಿಗೆ ಬೀಳುತ್ತವೆ. ಆದ್ದರಿಂದ ಬ್ಲಾಸ್ಟಿಂಗ್ ಮತ್ತು ಕ್ರಷಿಂಗ್ ಮಾಡುವುದನ್ನು ತಡೆಗಟ್ಟಿ ಕಲ್ಲು ಕುಟಿಕರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

Comments

Leave a Reply

Your email address will not be published. Required fields are marked *