ಸ್ಯಾಂಡಲ್‍ವುಡ್‍ನಲ್ಲಿಂದು ಡಬಲ್ ಧಮಾಕ – ಮನಸು ಮಲ್ಲಿಗೆ, ರೋಗ್ ಸಿನಿಮಾ ತೆರೆಗೆ

ಬೆಂಗಳೂರು: ಇಂದು ಸ್ಯಾಂಡಲ್‍ವುಡ್‍ನಲ್ಲಿ ಎರಡು ಭರ್ಜರಿ ಚಿತ್ರಗಳು ರಿಲೀಸ್ ಆಗ್ತಿವೆ. ದೇಶದ ಚಿತ್ರಪ್ರೇಮಿಗಳ ಮನಗೆದ್ದ ಮರಾಠಿಯ ಸೈರಾಟ್ ಚಿತ್ರ ಕನ್ನಡದಲ್ಲಿ ಮನಸು ಮಲ್ಲಿಗೆಯಾಗಿ ಇವತ್ತು ರಿಲೀಸ್ ಆಗಲಿದೆ.

ಕಳೆದ ವರ್ಷ ಮರಾಠಿ ಚಿತ್ರರಂಗವನ್ನ ಇಡೀ ಭಾರತೀಯ ಚಿತ್ರಪ್ರೇಮಿಗಳು ನೋಡುವಂತೆ ಮಾಡಿದ್ದ ಸಿನಿಮಾ ಸೈರಾಟ್. ಮರಾಠಿ ಚಿತ್ರರಂಗದಲ್ಲಿಯೇ ಮೊದಲ ಬಾರಿಗೆ ನೂರು ಕೋಟಿ ರೂ. ಸಂಪಾದಿಸಿತ್ತು. ಈಗ ಆ ಮರಾಠಿಯ ಮುದ್ದಾದ ಪ್ರೇಮಕಾವ್ಯ ಕನ್ನಡದಲ್ಲಿ ಮನಸು ಮಲ್ಲಿಗೆ ಎಂಬ ಹೆಸರಿನಲ್ಲಿ ಅರಳಲಿದೆ. ಕಲಾಸಾಮ್ರಾಟ್ ಎಸ್.ನಾರಾಯಣ್ ಕಲ್ಪನೆಯಲ್ಲಿ ಮನಸು ಮಲ್ಲಿಗೆ ಅರಳುತ್ತಿದೆ. ಮರಾಠಿಯ ಸೈರಾಟ್ ಚಿತ್ರದಲ್ಲಿ ಅಭಿನಯಿಸಿದ್ದ ರಿಂಕು ರಾಜ್‍ಗುರು ನಾಯಕಿಯಾಗಿ ಇಲ್ಲೂ ಮುಂದುವರೆದಿದ್ದಾರೆ. ನಿಶಾಂತ್ ಹೊಸ ನಾಯಕರಾಗಿದ್ದಾರೆ. ಮನಸು ಮಲ್ಲಿಗೆ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ.

ಇನ್ನು ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ 15 ವರ್ಷಗಳ ನಂತರ ರೋಗ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಬಂದಿದ್ದಾರೆ. ಹೊಸ ಹೀರೋಗಳನ್ನ ಸಿನಿ ಇಂಡಸ್ಟ್ರಿಗೆ ಪರಿಚಯ ಮಾಡೋದ್ರಲ್ಲಿ ನಿಸ್ಸೀಮರಾದ ಪೂರಿ ಜಗನ್ನಾಥ್, ಇದೀಗ ಹೊಸ ಪ್ರತಿಭೆ ಇಶಾನ್‍ರನ್ನ ಟಾಲಿವುಡ್ ಮತ್ತು ಸ್ಯಾಂಡಲ್‍ವುಡ್‍ಗೆ ಪರಿಚಯಿಸುತ್ತಿದ್ದಾರೆ. ಎರಡು ವಿಭಿನ್ನ ಶೇಡ್‍ನಲ್ಲಿ ಇಶಾನ್ ಕಾಣಿಸ್ಕೊಳ್ಳುತ್ತಿದ್ದು ಇಶಾನ್‍ಗೆ ಮನ್ನಾರಾ ಛೋಪ್ರಾ ಮತ್ತು ಆಂಜೆಲಾ ನಾಯಕಿಯರು. ಸಿ.ಆರ್.ಮನೋಹರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Comments

Leave a Reply

Your email address will not be published. Required fields are marked *