ಆನೆ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಮುಂದೆ ಏನಾಯ್ತು ಈ ಸ್ಟೋರಿ ಓದಿ

ಭುವನೇಶ್ವರ: ಸೆಲ್ಫಿ ತೆಗೆಯಲು ಹೋದ ವ್ಯಕ್ತಿಯನ್ನು ಆನೆ ತುಳಿದು ಕೊಂದು ಹಾಕಿರುವ ಘಟನೆ ಶನಿವಾರ ಒಡಿಶಾದ ಸುಂದ್‍ಗರ್ ತಾಲೂಕಿನಲ್ಲಿ ನಡೆದಿದೆ.

ಅಶೋಕ್ ಭಾರತಿ (54) ಮೃತ ವ್ಯಕ್ತಿ. ಕಟಕ್ ನಿವಾಸಿಯಾಗಿದ್ದ ಅಶೋಕ್ ಸುಂದ್‍ಗರ್‍ನ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.

ಆಗಿದ್ದೇನು?
ಜನರ ಸಹಾಯವನ್ನು ಪಡೆದು ಆನೆಯನ್ನು ಕಾಡಿಗೆ ಓಡಿಸುತ್ತಿದ್ದೇವು. ಆಗ ಗುಂಪಿನಲ್ಲಿದ್ದ ಅಶೋಕ್ ಆನೆಯ ಬಳಿ ಬಂದು ಫೋಟೋವನ್ನು ತೆಗೆಯುತ್ತಿದ್ದರು. ನಂತರ ಸೆಲ್ಫಿ ತೆಗೆಯಲು ಆನೆಯತ್ತ ಹೋದಾಗ ಅದು ತಿರುಗಿ ಕಾಲಿನಿಂದ ತುಳಿದು ಹತ್ಯೆ ಮಾಡಿದೆ.

ಗಂಭೀರವಾಗಿ ಗಾಯಗೊಂಡಿದ್ದ ಆಶೋಕ್ ಅವರನ್ನು ಅರಣ್ಯ ಅಧಿಕಾರಿಗಳು ಮತ್ತು ಜನರು ರಕ್ಷಿಸಿ ರೋರ್‍ಕುಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಅಶೋಕ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

 

Comments

Leave a Reply

Your email address will not be published. Required fields are marked *