ನಾಯಿಗೆ ಆಹಾರ ಹಾಕಿಲ್ಲ ಎಂದು ಕ್ರೂರವಾಗಿ ಸಹೋದರನನ್ನು ಥಳಿಸಿ ಕೊಂದ

ತಿರುವನಂತಪುರಂ: ನಾಯಿಗೆ (Dog) ಆಹಾರ (Food) ಹಾಕಿಲ್ಲ ಎಂದು ಸಹೋದರನನ್ನು (Cousin) ಯುವಕನೊಬ್ಬ ಕೊಲೆ ಮಾಡಿದ ಘಟನೆ ಕೇರಳದ ಪಾಲಕ್ಕಾಡ್‍ನಲ್ಲಿ ನಡೆದಿದೆ.

ಹರ್ಷದ್(21)ನನ್ನು ಆತನ ಸಹೋದರ ಹಕೀಂ (27) ಎಂಬಾತ ಪಾಲಕ್ಕಾಡ್ ಜಿಲ್ಲೆಯ ಮುಲಯಂಕಾವು ಪ್ರದೇಶದಲ್ಲಿ ಕೊಲೆ ಮಾಡಿದ್ದಾನೆ. ಹರ್ಷದ್ ಮತ್ತು ಹಕೀಂ ಪೆರುಮತ್ತೋಡಿ ಗ್ರಾಮದಲ್ಲಿ ಮನೆ ಮಾಡಿಕೊಂಡು ಒಟ್ಟಿಗೆ ಇದ್ದರು. ಅಷ್ಟೇ ಅಲ್ಲದೇ ಇಬ್ಬರು ಕೇಬಲ್ ವರ್ಕ್ ಮಾಡುತ್ತಿದ್ದರು.

crime

ಹಕೀಂ ಅಲ್ಲಿ ಒಂದು ನಾಯಿಯನ್ನು ಸಾಕಿದ್ದ. ಆ ನಾಯಿಗೆ ಆಹಾರವನ್ನು ನೀಡಿಲ್ಲ ಎಂದು ಹರ್ಷದ್‍ಗೆ ನಾಯಿ ಬೆಲ್ಟ್ ಹಾಗೂ ಮರದ ಕೋಲಿನಿಂದ ಮನಬಂದಂತೆ ಥಳಿಸಿದ್ದಾನೆ. ಈ ವೇಳೆ ಹರ್ಷದ್‍ಗೆ ಗಂಭೀರ ಗಾಯವಾಗಿದೆ.

ಈ ಹಿನ್ನೆಲೆಯಲ್ಲಿ ಹೆದರಿದ ಹಕೀಂ ಹಾಗೂ ಆತನ ಸ್ನೇಹಿತರಿಬ್ಬರು ಹರ್ಷದ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದಾದ ಬಳಿಕ ಹಕೀಂ ಆಸ್ಪತ್ರೆ ವೈದ್ಯರ ಬಳಿ ಹರ್ಷದ್ ಮೇಲ್ಛಾವಣಿಯಿಂದ ಬಿದ್ದಿದ್ದರಿಂದ ಈ ರೀತಿ ಆಗಿದೆ ಎಂದು ಸುಳ್ಳು ಹೇಳಿದ್ದಾನೆ. ಆದರೆ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಗಂಭೀರಗಾಯಗೊಂಡಿದ್ದ ಹರ್ಷದ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ದೇಶದಲ್ಲಿ ಬಿಕ್ಕಟ್ಟು ಉಂಟಾದಾಗ ಅಣ್ಣ-ತಂಗಿ ವಿದೇಶಕ್ಕೆ ಓಡಿ ಹೋಗ್ತಾರೆ: ರಾಹುಲ್, ಪ್ರಿಯಾಂಕಾಗೆ ಯೋಗಿ ಟಾಂಗ್

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಕೀಂನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಪ್ಪೊಪ್ಪಿಕೊಂಡ ಹಕ್ಕಿಂನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕ್ವಾರಂಟೈನ್ ಮುಗಿಸಿ ಬೇಟೆ ಆರಂಭಿಸಿದ ಚೀತಾಗಳು – ಮೋದಿ ಸಂತಸ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *