ವರದಕ್ಷಿಣೆ ಕಿರುಕುಳ, ಅಕ್ರಮ ಸಂಬಂಧದ ಆರೋಪಿಸಿ ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ!

ಮೈಸೂರು: ದುಷ್ಟ ಪತಿಯೊಬ್ಬ ಪತ್ನಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕರಡಿಮೊಳೆಯಲ್ಲಿ ನಡೆದಿದೆ.

ಮಹಾದೇವಿ(22) ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮಹಿಳೆ. ವರದಕ್ಷಿಣೆ ತರುವಂತೆ ಕಿರುಕುಳ ನೀಡಿ, ಅಕ್ರಮ ಸಂಬಂಧದ ಆರೋಪ ಮಾಡುತ್ತಿದ್ದ ಈಕೆಯ ಪತಿ ನಾಗೇಶ್ ಈಕೆಯ ಕೊಲೆಗೆ ಯತ್ನಿಸಿದ್ದಾನೆ.

ನಂಜನಗೂಡು ತಾಲೂಕು ಕರಳಪುರ ಗ್ರಾಮದ ನಿವಾಸಿಯಾಗಿದ್ದ ಮಹದೇವಿ, 4 ವರ್ಷದ ಹಿಂದಷ್ಟೇ ಚಾಮರಾಜನಗರದ ನಾಗೇಶ್ ಜೊತೆಗೆ ಮದುವೆ ಆಗಿದ್ದರು. ಪತಿಯ ಜೊತೆ ಗಲಾಟೆಯಿಂದ ಬೇಸತ್ತು 2 ವರ್ಷದಿಂದ ಮಹಾದೇವಿ ತನ್ನ ತಾಯಿ ಮನೆಯಲ್ಲಿ ವಾಸವಿದ್ದರು.

ಇತ್ತೀಚೆಗೆ ಹಿರಿಯ ಸಮ್ಮುಖದಲ್ಲಿ ಸಂಧಾನ ನಡೆದು 20 ದಿನದಿಂದಷ್ಟೇ ಗಂಡನ ಮನೆಗೆ ಮಹಾದೇವಿ ಹೋಗಿದ್ದರು. ಮೊನ್ನೆ ರಾತ್ರಿ ಗಂಡನೇ ಸೀಮೆಎಣ್ಣೆ ಸುರಿದು ಈಕೆಯ ಕೊಲೆಗೆ ಯತ್ನಿಸಿದ್ದಾನೆ. ಈ ಬಗ್ಗೆ ಮಹದೇವಿ ಸಂತೆಮರಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *