ನಾಗರಹಾವಿನ ಮೇಲೆ ಹರಿದ ಬೈಕ್- ಮೂಳೆ ಹೊರಬಂದು ಸಾವು ಬದುಕಿನ ಮಧ್ಯೆ ಹೋರಾಟ

ಮಂಡ್ಯ: ಬೈಕ್ ಹರಿದು ಮೂಳೆ ಹೊರ ಬಂದು ಗಾಯಗೊಂಡಿದ್ದ ನಾಗರ ಹಾವು ಸಾವು ಬದುಕಿನ ಮಧ್ಯೆ ಹೋರಾಡುತ್ತಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶಾಂತಿಕೋಪ್ಪಲು ಗ್ರಾಮದ ರಸ್ತೆಯಲ್ಲಿ ಬೈಕ್ ಸವಾರನೊಬ್ಬ ನಾಗರಹಾವಿನ ಮೇಲೆ ಹರಿದ ಬೈಕ್ ಹರಿಸಿದ್ದಾನೆ. ಪರಿಣಾಮ ಹಾವಿನ ತಲೆಯ ಭಾಗದಲ್ಲಿ ಮೂಳೆ ಮುರಿದಿದೆ. ಮೂಳೆ ಹೊರ ಬಂದು ಗಾಯಗೊಂಡ ನಾಗರಹಾವು ಜೀವನ್ಮರಣದ ಮಧ್ಯೆ ಹೋರಾಡುತ್ತಿದೆ.

ಹಾವಿನ ಪರಿಸ್ಥಿತಿ ನೋಡಲಾಗದೇ ಶಾಂತಿಕೋಪ್ಪಲ ಗ್ರಾಮದ ರೈತರೊಬ್ಬರು ವ್ಯಥೆ ಪಟ್ಟಿದ್ದಾರೆ. ರೈತ ಉರಗ ಸಂರಕ್ಷಕ ಕೆಂಪರಾಜುರನ್ನ ಸಂಪರ್ಕಿಸಿದ್ದಾರೆ. ಕೆಂಪರಾಜು ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ನಾಗರಹಾವಿಗೆ ನೀರು ಕುಡಿಸಿ ರಕ್ಷಿಸಿದ್ದಾರೆ. ಸದ್ಯ ನಾಗರಹಾವಿಗೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇರುವುದರಿಂದ ಪಶು ಚಿಕಿತ್ಸಾಲಯಕ್ಕೆ ಕೊಂಡೊಯ್ದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *