ವಾಟ್ಸಪ್‍ನಲ್ಲಿ ಸಾವಿನ ಸಂದೇಶದ ವಿಡಿಯೋ ಹರಿಬಿಟ್ಟು ನಾಪತ್ತೆ

ರಾಯಚೂರು: ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ವಾಟ್ಸಪಿನಲ್ಲಿ ವಿಡಿಯೋ ಹರಿಬಿಟ್ಟಿದ್ದು, ಇದುವರೆಗೂ ಆತ ಪತ್ತೆಯಾಗಿಲ್ಲ.

ರಾಯಚೂರಿನ ಮಸ್ಕಿಯ ಗುತ್ತಿಗೆದಾರ ಚನ್ನಬಸವ ಸಾಲಬಾಧೆ ಹಾಗೂ ಹಣ ನೀಡಬೇಕಾದವರು ಕೊಡದೆ ಕಿರುಕುಳ ಕೊಡುತ್ತಿದ್ದಾರೆ ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ವಾಟ್ಸಪ್ ನಲ್ಲಿ ಭಾನುವಾರ ವಿಡಿಯೋ ಹರಿಬಿಟ್ಟಿದ್ದಾರೆ. ಅಲ್ಲದೆ ತುಂಗಭದ್ರಾ ಎಡದಂಡೆ ನಾಲೆ ಗುಡುದೂರು ಬಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ.

ಕಾಲುವೆ ಬಳಿ ಚನ್ನಬಸವನ ಬಟ್ಟೆ ಹಾಗೂ ಡೆತ್ ನೋಟ್ ಸಿಕ್ಕಿವೆ. ಆದರೆ ಚನ್ನಬಸವ ಇದುವರೆಗೂ ಪತ್ತೆಯಾಗಿಲ್ಲ. ಅಂದಾನಪ್ಪ, ದೊಡ್ಡಪ್ಪ ಸಗರದ, ಸಣ್ಣಮೌನೇಶಗೌಡ, ಡಾ.ನಾಗನಗೌಡ ಎಂಬವರು ಒಟ್ಟು 12 ಲಕ್ಷ 74 ಸಾವಿರ ಕೊಡಬೇಕಿತ್ತು. ಆದರೆ ಹಣ ಕೊಡದೆ ಕಿರುಕುಳ ನೀಡಿದ್ದಾರೆ. ಇದರಿಂದ ಸಾಲ ಹೆಚ್ಚಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

ಭಾನುವಾರ ರಾತ್ರಿವರೆಗೂ ಕಾಲುವೆಯಲ್ಲಿ ಚನ್ನಬಸವರಿಗಾಗಿ ಹುಡುಕಾಟ ನಡೆದಿದೆ. ಆದರೆ ಚನ್ನಬಸವನ ಕುರಿತು ಬದುಕಿರುವ ಅಥವಾ ಸತ್ತಿರುವ ಸುಳಿವು ಸಿಕ್ಕಿಲ್ಲ. ಸಿಂಧನೂರಿನ ಬಳಗಾನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *