ಮದ್ವೆಯಾಗದೇ ನಿರಂತರ ದೈಹಿಕ ಸಂಬಂಧ ಹೊಂದಲು ಮುತ್ತುಕಟ್ಟಿ ದೇವದಾಸಿ ಮಾಡ್ದ!

ಕೊಪ್ಪಳ: ಯುವತಿಯೊಂದಿಗೆ ಪ್ರೀತಿ ನಾಟಕವಾಡಿದ್ದ ವ್ಯಕ್ತಿ ಆಕೆಯನ್ನು ದೇವದಾಸಿ ಪದ್ಧತಿಗೆ ದೂಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕುಷ್ಟಗಿ ತಾಲೂಕು ತೆಗ್ಗಿಹಾಳ ಗ್ರಾಮದಲ್ಲಿ 22 ವರ್ಷದ ಯುವತಿಯನ್ನು ದೇವದಾಸಿ ಪದ್ಧತಿಗೆ ದೂಡಲಾಗಿದೆ. ತೆಗ್ಗಿಹಾಳ ಗ್ರಾಮದ ಚಂದ್ರಶೇಖರ್ ಕುರಿ ಎಂಬಾತ ಆ ಗ್ರಾಮದ ದಲಿತ ಯುವತಿಯೊಂದಿಗೆ ಪ್ರೀತಿ ನಾಟಕವಾಡಿ ದೈಹಿಕವಾಗಿ ಸಂಪರ್ಕ ಬೆಳೆಸಿದ್ದಾನೆ.

ಈ ವಿಷಯ ತಿಳಿದ ಯುವತಿಯ ಸಹೋದರ ಆಕೆಗೆ ಮದುವೆ ಮಾಡಿಸಲು ಮುಂದಾಗಿದ್ದಾನೆ. ಮದುವೆಯಾದರೆ ಯುವತಿ ದೂರವಾಗುತ್ತಾಳೆ ಎಂಬ ಕಾರಣಕ್ಕೆ ಆಕೆ ತಾಯಿ ಮತ್ತು ಸೋದರ ಮಾವನಿಗೆ ಯುವಕ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ ಹಣದ ಆಮಿಷ ತೋರಿಸಿ ಆಕೆಗೆ ಮುತ್ತು ಕಟ್ಟಿಸಿದ್ದಾನೆ. ಆಕೆಯನ್ನು ಮದುವೆಯಾಗದೇ ನಿರಂತರ ದೈಹಿಕ ಸಂಬಂಧ ಇಟ್ಟುಕೊಳ್ಳುವ ದುರುದ್ದೇಶದಿಂದ ಚಂದ್ರಶೇಖರ ಈ ಕೃತ್ಯ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

ಮುತ್ತು ಕಟ್ಟಿ ದೇವದಾಸಿ ಮಾಡಿಸಿ ಬಾಳು ಹಾಳು ಮಾಡಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿದರೂ ಅನಿಷ್ಠ ಪದ್ಧತಿ ತಡೆಯುವಲ್ಲಿ ಕೊಪ್ಪಳ ಜಿಲ್ಲಾಡಳಿತ ವಿಫಲವಾಗಿದೆ ಎಂದು ವಿಮುಕ್ತ ದೇವದಾಸಿ ಮಹಿಳೆಯರು ಮತ್ತು ಮಕ್ಕಳ ವೇದಿಕೆ ಆರೋಪಿಸಿದೆ.

Comments

Leave a Reply

Your email address will not be published. Required fields are marked *