ನಾಯಿಯನ್ನ ಕೊಂದ ಇಬ್ಬರು ಗಂಡುಮಕ್ಕಳ ವಿರುದ್ಧ ತಂದೆಯಿಂದಲೇ ಕೇಸ್

ರಾಯ್ಪುರ್: ತನ್ನ ಸಾಕು ನಾಯಿಯನ್ನ ಕೊಂದಿದ್ದಕ್ಕೆ ತಂದೆಯೇ ತನ್ನ ಇಬ್ಬರು ಗಂಡು ಮಕ್ಕಳ ವಿರುದ್ಧ ಎಫ್‍ಐಆರ್ ದಾಖಲಿಸಿರೋ ಘಟನೆ ಛತ್ತೀಸ್‍ಗಢದ ಸೂರಜ್‍ಪುರ್ ಜಿಲ್ಲೆಯ ಪೋಡಿ ಗ್ರಾಮದಲ್ಲಿ ನಡೆದಿದೆ.

ಶಿವಮಂಗಲ್ ಸಾಯಿ(50) ಎಂಬವರು ತನ್ನ ಇಬ್ಬರು ಗಂಡುಮಕ್ಕಳ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಶಿವಮಂಗಲ್ ಮನೆಯಲ್ಲಿ ಇಲ್ಲದ ವೇಳೆ ಮಕ್ಕಳು ಕೊಡಲಿಯಿಂದ ನಾಯಿಯನ್ನ ಕೊಂದಿದ್ದಾರೆ. ಮನೆಗೆ ವಾಪಸ್ ಬಂದ ಶಿವಮಂಗಲ್ ನಾಯಿ ಸಾವನ್ನಪ್ಪಿರುವುದನ್ನು ನೋಡಿ ಜಗಳವಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ತನ್ನ ನಾಯಿಯನ್ನು ಕೊಂದ ಆರೋಪದ ಮೇಲೆ ಮಕ್ಕಳ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ನಾಯಿಯ ಮೃತದೇಹವನ್ನ ಸೈಕಲ್ ಮೇಲಿರಿಸಿಕೊಂಡು ಪೊಲೀಸ್ ಠಾಣೆಗೆ ಹೋದ ಶಿವಮಂಗಲ್, ಮಕ್ಕಳ ವಿರುದ್ಧ ಕೇಸ್ ದಾಖಲಿಸಬೇಕೆಂದು ಹೇಳಿದ್ದಾರೆ. ಅವರ ದೂರಿನನ್ವಯ ಗಂಡುಮಕ್ಕಳ ವಿರುದ್ಧ ಐಪಿಸಿ ಸೆಕ್ಷನ್ 429ರ ಅಡಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶಿವಮಂಗಲ್ ಅವರ ಇಬ್ಬರು ಮಕ್ಕಳಿಗೆ ಸಾಕು ನಾಯಿ ಇಷ್ಟವಿರಲಿಲ್ಲ. ತನ್ನ ತಂದೆ ಪ್ರಾಣಿಗಳಿಂದ ದೂರವಿರಬೇಕೆಂದು ಬಯಸಿದ್ದರು. ಆದ್ರೆ ಶಿವಮಂಗಲ್ ನಾಯಿಯನ್ನ ದೂರ ಮಾಡಲು ನಿರಾಕರಿಸಿದ್ದರು. ಹೀಗಾಗಿ ಮಕ್ಕಳು ನಾಯಿಯನ್ನ ಕೊಂದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಶಿವಮಂಗಲ್ ಅವರ ಮಕ್ಕಳಲ್ಲಿ ಒಬ್ಬನಾದ ಶಿವನಾಥ್ ಪೊಲೀಸರಿಗೆ ಈ ಬಗ್ಗೆ ಹೇಳಿಕೆ ನೀಡಿದ್ದು, ನಾಯಿ ತನ್ನ ತಾಯಿಯನ್ನ ಚೇಸ್ ಮಾಡಿ ಅವರ ಮೇಲೆ ದಾಳಿ ಮಾಡಿತ್ತು. ಹೀಗಾಗಿ ಇದರಿಂದ ಕಿರಿಕಿರಿಯಾಗ್ತಿತ್ತು. ನಾಯಿ ದಾಳಿಯಿಂದ ತಾಯಿಗೆ ಗಂಭೀರ ಗಾಯವಾಗಬಹುದು ಎಂದು ಹೆದರಿ ಅದನ್ನ ಕೊಲೆ ಮಾಡಿದೆ ಎಂದಿದ್ದಾನೆ.

ಆದ್ರೆ ತಂದೆ ಇದಕ್ಕೆ ಉತ್ತರಿಸಿ ನನ್ನ ನಾಯಿ ಪಳಗಿದ ನಾಯಿಯಾಗಿತ್ತು. ಮನೆಯಲ್ಲಿ ಎಲ್ಲರನ್ನೂ ತುಂಬಾ ಪ್ರೀತಿಸುತ್ತಿತ್ತು. ಆದ್ರೆ ಇವರು ಅದನ್ನು ಕೊಂದಿದ್ದಾರೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *