ಸಿದ್ದರಾಮಯ್ಯಗೆ ವಿಶ್ ಮಾಡಲು ಬಂದು ಕಿಸ್ ಕೊಟ್ಟ ಯುವಕ – ವಿಡಿಯೋ ವೈರಲ್

ಕಲಬುರಗಿ: ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಸಿದ್ದರಾಮ್ಯಯ ಅವರಿಗೆ ವೇದಿಕೆ ಮೇಲೆ ಶುಭಕೋರಲು ಬಂದು ಯುವಕನೊಬ್ಬ ಮುತ್ತು ಕೊಟ್ಟಿದ್ದು, ಯುವಕನ ಈ ನಡವಳಿಕೆಗೆ ಸಿದ್ದರಾಮಯ್ಯ ಸಖತ್ ಗರಂ ಆಗಿದ್ದಾರೆ.

ಜಿಲ್ಲೆಯ ಜೇವರ್ಗಿಯ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರಿಗೆ ವೇದಿಕೆ ಮೇಲೆ ಸನ್ಮಾನ ಮಾಡಲಾಗುತಿತ್ತು. ಈ ವೇಳೆ ಸಿದ್ದು ಅಭಿಮಾನಿಗಳ ಗುಂಪಿನಲ್ಲಿ ಶುಭ ಕೋರಲು ಬಂದ ಯುವಕ ಮುತ್ತು ಕೊಡಲು ಯತ್ನಿಸಿದ್ದಾನೆ. ಯುವಕನ ವರ್ತನೆ ಕಂಡು ಕ್ಷಣ ಕಾಲ ವಿಚಲಿತರಾದ ಸಿದ್ದರಾಮಯ್ಯ ಅವರು ಆತನ ವಿರುದ್ಧ ಗರಂ ಆಗಿದ್ದಾರೆ.

ಸಿದ್ದರಾಮಯ್ಯ ಅವರನ್ನು ಕಂಡರೆ ಸಾಮಾನ್ಯವಾಗಿ ಸೆಲ್ಫಿ ತೆಗೆದುಕೊಳ್ಳು ನೂಕುನುಗ್ಗಲು ನಡೆಯುತ್ತಿತ್ತು. ಆದರೆ ಯುವಕ ಮುತ್ತು ಕೊಡಲು ಯತ್ನಿಸಿ ನೆರೆದಿದ್ದ ಜನರಿಗೂ ಅಚ್ಚರಿ ಮೂಡಿಸಿದ್ದಾನೆ.

ಆ ವೇಳೆ ಸಿದ್ದರಾಮಯ್ಯ ಅವರ ಸುತ್ತಲು ಇದ್ದ ಮುಖಂಡರು ತಕ್ಷಣ ಎಚ್ಚೆತ್ತು ಯುವಕನನ್ನು ಅಲ್ಲಿಂದ ತೆರಳುವಂತೆ ಸೂಚಿಸಿದರು. ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗುತ್ತಾ ಯುವಕ ಅಲ್ಲಿಂದ ತೆರಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಗುರುವಾರ ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *