ಶಾಲೆ ಮುಂದೆ ನಿಂತಿದ್ದ ಶಿಕ್ಷಕಿ ಕುತ್ತಿಗೆಗೆ ಚಾಕು ಹಾಕಿದ ಪಾಗಲ್ ಪ್ರೇಮಿ

ಚೆನ್ನೈ: ಪ್ರೀತಿ ನಿರಾಕರಿಸಿದಕ್ಕೆ ಪ್ರಿಯಕರನೇ ಶಾಲೆಯ ಆವರಣದ ಮುಂದೆ ನಿಂತಿದ್ದ 23 ವರ್ಷದ ಶಿಕ್ಷಕಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.

ಎಸ್.ರಮ್ಯಾ(23) ಕೊಲೆಯಾದ ಶಿಕ್ಷಕಿ. ರಮ್ಯಾ ಕುರಿಂಜಿಪಾಡಿನಲ್ಲಿರುವ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು. ಮೃತ ರಮ್ಯಾ ಕಡಲೂರಿನ ಪೆರಿಯಾರ್ ಆರ್ಟ್ಸ್ ಕಾಲೇಜಿನಿಂದ ಪದವಿ ಪಡೆದ ನಂತರ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.


ಶುಕ್ರವಾರ ಮುಂಜಾನೆ ಗ್ರಾಮದ ಶಾಲೆಯ ಗೇಟ್ ತೆರೆದಿರಲಿಲ್ಲ. ಹೀಗಾಗಿ ಮೃತ ಶಿಕ್ಷಕಿ ಶಾಲೆಯ ಮುಂದೆಯೇ ನಿಂತು ಕಾಯುತ್ತಿದ್ದರು. ಈ ವೇಳೆ ಆರೋಪಿ ರಾಜಾಶೇಖರ್ ಮೋಟಾರು ಬೈಕಿನಲ್ಲಿ ಬಂದು ಶಿಕ್ಷಕಿಯ ಸಮೀಪಕ್ಕೆ ಹೋಗಿದ್ದಾನೆ. ನಂತರ ಏಕಾಏಕಿ ಚಾಕುವಿನಿಂದ ಶಿಕ್ಷಕಿಯ ಕುತ್ತಿಗೆ ಇರಿದು ಪರಾರಿಯಾಗಿದ್ದಾನೆ. ಇತ್ತ ತೀವ್ರ ರಕ್ತಸ್ರಾವವಾಗಿದ್ದರಿಂದ ಶಿಕ್ಷಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ರಾಜಶೇಖರ್ ಊಮಂಗಲಂ ನಿವಾಸಿಯಾಗಿದ್ದು, ಕೆಲವು ತಿಂಗಳಿನಿಂದ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ರಮ್ಯಾರನ್ನು ಹಿಂಬಾಲಿಸುತ್ತಿದ್ದನು. ಇತ್ತೀಚೆಗೆ ಮದುವೆಯಾಗುವಂತೆ ಕೂಡ ಕೇಳಿದ್ದಾನೆ. ಆದರೆ ರಮ್ಯಾ ಆತನ ಪ್ರೀತಿಯನ್ನು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಕೊಲೆ ಮಾಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾವು ಕೊಲೆ ಮಾಡಿದ್ದ ಆರೋಪಿಯನ್ನು ಗುರುತಿಸಿದ್ದೇವೆ. ಈ ಕುರಿತು ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಆರೋಪಿಯ ಹುಡುಕಾಟ ನಡೆಸುತ್ತಿದ್ದು, ಶೀಘ್ರವೇ ಬಂಧಿಸುತ್ತೇವೆ. ರಾಜಶೇಖರ್ ವಿರುದ್ಧ ಈ ಹಿಂದೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಅಧೀಕ್ಷಕ ಪಿ. ಸರವಣನ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *