ಮೊಬೈಲ್‍ನಲ್ಲಿ ಗೇಮ್ ಆಡೋದು ಬಿಟ್ಟು, ಕೆಲಸ ಹುಡುಕು ಎಂದಿದ್ದಕ್ಕೆ ಅತ್ತಿಗೆಯನ್ನೇ ಕೊಂದ

ಮುಂಬೈ: ಫೋನ್‍ನಲ್ಲಿ ಆಟವಾಡುವುದನ್ನು ನಿಲ್ಲಿಸಿ, ಕೆಲಸ ಹುಡುಕುವಂತೆ ಹೇಳಿದಕ್ಕೆ ಯುವಕನೊಬ್ಬ ಅತ್ತಿಗೆಯನ್ನು ಕೊಂದು ಆತ್ಮಹತ್ಯೆಯಂತೆ ಬಿಂಬಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆಸಿದೆ.

ಬಂಧಿತ ಆರೋಪಿ ಇರ್ಷಾದ್ ಆಲಂ (19)ನು ಅತ್ತಿಗೆ ಸಾಹಿಬಾ(25)ಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿ ಪೊಲೀಸರಿಗೆ ಸಾಹಿಬಾ ಇಲಿ ಪಾಷಾಣ ಸೇವಿಸಿ ಮೃತಪಟ್ಟಿದ್ದಾಳೆ ಎಂದು ಮಾಹಿತಿ ನೀಡಿದ್ದನು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

CRIME 2

ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಹೊಟ್ಟೆಯಲ್ಲಿ ಇಲಿ ಇಲಿ ಪಾಷಾಣ ಸೇವಿಸಿರುವ ಯಾವುದೇ ಕುರುಹು ಕಂಡು ಬಂದಿರಲಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಆದರೆ ಆಕೆಯ ಕುತ್ತಿಗೆಯ ಮೇಲೆ ಇದ್ದ ಗುರುತುಗಳನ್ನು ನೋಡಿ ಇದು ಕೊಲೆ ಎಂದು ಅನುಮಾನಗೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಕನ್ಹಯ್ಯಾ ಲಾಲ್ ಕುಟುಂಬಕ್ಕೆ ನೆರವು – 24 ಗಂಟೆಯಲ್ಲಿ ಬಂತು 1 ಕೋಟಿ

ಈ ಹಿನ್ನೆಲೆಯಲ್ಲಿ ಇರ್ಷಾದ್‍ನನ್ನು ಮತ್ತೆ ಪ್ರಶ್ನಿಸಿದಾಗ ಆತ ಅಪರಾಧವನ್ನು ಒಪ್ಪಿಕೊಂಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಸಾಹಿಬಾಳ ಪತಿ ಜುಬೇರ್ ದಿಗೂಲಿ ನೌಕರನಾಗಿದ್ದು, ಘಟನೆ ನಡೆದಾಗ ಆತ ಕೆಲಸಕ್ಕೆ ಹೋಗಿದ್ದನೆಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಗಲ್ಲು

Live Tv

Comments

Leave a Reply

Your email address will not be published. Required fields are marked *