ದೇವಿಯ ಬಲಿಗಾಗಿ ಬಿಟ್ಟ ಕೋಣದಿಂದ ವ್ಯಕ್ತಿ ಬಲಿ!

ತುಮಕೂರು: ಕೋಣ ತಿವಿತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹೊನ್ನೇಹಳ್ಳಿಯಲ್ಲಿ ನಡೆದಿದೆ.

ದಾಸಮಾರಪ್ಪ(65) ಮೃತ ದುರ್ದೈವಿ. ದಾಳಿ ನಡೆಸಿದ ಕೋಣವನ್ನು ಕೆಲವು ವರ್ಷಗಳ ಹಿಂದೆ ಮಾರಮ್ಮ ದೇವಿ ಬಲಿಗಾಗಿ ಬಿಡಲಾಗಿತ್ತು. ದಾಸಮಾರಪ್ಪ ಹೊಲದಲ್ಲಿ ಕೆಲಸ ಮಾಡುವ ವೇಳೆ ಏಕಾಏಕಿ ಕೋಣ ದಾಳಿ ಮಾಡಿದ್ದು, ಬಲವಾಗಿ ತಿವಿದಿದ್ದರಿಂದ ದಾಸಮಾರಪ್ಪ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಶಾಸಕ ಸತ್ಯನಾರಾಯಣ್ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕೋಣನ ಹಾವಳಿ ಹಾಗೂ ಆರ್ಭಟಕ್ಕೆ ಹೊನ್ನೇನಹಳ್ಳಿ ಗ್ರಾಮಸ್ಥರು ತತ್ತರಿಸಿದ್ದು, ಅದನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಈಗ ದೌಡಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *