ಪೊಲೀಸರಿಂದ ತಪ್ಪಿಸಿಕೊಳ್ಳಲು ಹಳ್ಳಕ್ಕೆ ಹಾರಿ ಹೆಣವಾದ!

ಮಂಡ್ಯ: ಇಸ್ಪಿಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ತಪ್ಪಿಸಿಕೊಳ್ಳಲು ಹಳ್ಳಕ್ಕೆ ಹಾರಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಡ್ಯದ ಹೊರವಲಯದಲ್ಲಿ ನಡೆದಿದೆ.

ಮಧು(30) ಎಂಬವರೇ ಹಳ್ಳಕ್ಕೆ ಹಾರಿದ ವ್ಯಕ್ತಿ. ಗುರುವಾರ ರಾತ್ರಿ ಮಂಡ್ಯ ನಗರದ ಹೊರವಲಯದ ಹೆಬ್ಬಳ್ಳದ ಬಳಿ ಗುಂಪೊಂದು ಇಸ್ಪಿಟ್ ಆಟದಲ್ಲಿ ತೊಡಗಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ದಾಳಿ ನಡೆಸಿದ್ದರು. ಪೊಲೀಸರು ಬಂದ ತಕ್ಷಣ ಇಸ್ಪಿಟ್ ಆಡುತ್ತಿದ್ದವರು ದಿಕ್ಕಾಪಾಲಾಗಿ ಓಡಿದ್ದಾರೆ.

ಈ ವೇಳೆ ಮಧು ಎಂಬ ವ್ಯಕ್ತಿ ಪಕ್ಕದಲ್ಲೇ ಇದ್ದ ಹಳ್ಳಕ್ಕೆ ಜಿಗಿದಿದ್ದಾನೆ. ಎಲ್ಲರೂ ಓಡಿ ಹೋದ ಕಾರಣ ಪೊಲೀಸರು ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸ್ಸಾಗಿದ್ರು. ಆದರೆ ರಾತ್ರಿ ನೀರಿಗೆ ಹಾರಿದ ಮಧು ಬೆಳಗ್ಗೆಯಾದರೂ ಮನೆಗೆ ಬಾರದಿದ್ದಾಗ, ಮಧುವಿನ ಪೋಷಕರು ಮಗನನ್ನು ಹುಡುಕಿಕೊಡುವಂತೆ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ರು.

ತಕ್ಷಣ ಎಚ್ಚೆತ್ತ ಪೊಲೀಸ್ ಇಲಾಖೆ ಮಧು ತಪ್ಪಿಸಿಕೊಳ್ಳಲು ಹಾರಿದ ಹಳ್ಳದಲ್ಲಿ ಹುಡುಕಿದಾಗ ಆತನ ಮೃತದೇಹ ಪತ್ತೆಯಾಗಿದೆ. ಎಲ್ಲರ ಕಣ್ಣೆದುರೇ ನೀರಿಗೆ ಹಾರಿದರೂ ಯಾರೋಬ್ಬರು ನಮ್ಮ ಮಗನನ್ನು ರಕ್ಷಿಸಲಿಲ್ಲ ಎಂದು ಇದೀಗ ಮೃತನ ತಾಯಿ ಕಣ್ಣೀರು ಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *