ಮಾಂತ್ರಿಕನ ಜೊತೆ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ಪತ್ನಿಯನ್ನು ನದಿಯಲ್ಲಿ ಮುಳುಗಿಸ್ದ

ಲಕ್ನೋ: ಮಾಂತ್ರಿಕನ ಜೊತೆ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಅಲಿಘರ್ ನಲ್ಲಿ ನಡೆದಿದೆ.

ಮಾನ್‍ಪಾಲ್ ಕೊಲೆ ಮಾಡಿದ ಆರೋಪಿ. ಮಾನ್‍ಪಾಲ್ ತನ್ನ ಪತ್ನಿಯನ್ನು ಕೊಲೆ ಮಾಡುತ್ತಿರುವುದನ್ನು ಆತನ ಮಗ ನೋಡಿದ್ದಾನೆ. ಅಲ್ಲದೆ ತನ್ನ ತಾಯಿಯನ್ನು ರಕ್ಷಿಸಲು ಮುಂದಾದರೆ ಕೊಲುವುದಾಗಿ ಮಹಿಳೆಯ ಸಹೋದರ ಬೆದರಿಕೆ ಹಾಕಿದ್ದನು.

ಈ ಬಗ್ಗೆ ಮಹಿಳೆಯ ಸಹೋದರ ರಾಜೇಶ್ ಕುಮಾರ್ ದೂರು ನೀಡಲು ದಾಡೋನ್ ಪೊಲೀಸ್ ಠಾಣೆಗೆ ಹೋಗಿದ್ದರು. ಅಲ್ಲದೆ ಎರಡು ದಿನಗಳ ಹಿಂದೆ ನನ್ನ ಸಹೋದರಿ ಭಯಗೊಂಡು ನನಗೆ ಕರೆ ಮಾಡಿ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಹೇಳಿದ್ದಳು ಎಂದು ರಾಜೇಶ್ ತಿಳಿಸಿದ್ದಾರೆ ಎಂದು ಎಸ್‍ಎಸ್‍ಪಿ ಆಕಾಶ್ ಕುಲ್ಹಾರಿ ತಿಳಿಸಿದ್ದಾರೆ.

ಮಾಂತ್ರಿಕನ ವಿಷಯಕ್ಕಾಗಿ ಪತಿ -ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಬಳಿಕ ಗುರುವಾರ ಈ ವಿಷಯ ಇತ್ಯರ್ಥವಾಗಿ ಮಾನ್‍ಪಾಲ್ ನದಿ ಬಳಿ ಹೋಗೋಣ ಎಂದು ತನ್ನ ಪತ್ನಿಯನ್ನು ಕರೆದುಕೊಂಡು ಹೋದನು. ಅಲ್ಲಿಗೆ ಹೋಗುತ್ತಿದ್ದಂತೆ ಮಾನ್‍ಪಾಲ್ ಆಕೆಯನ್ನು ನದಿಗೆ ತಳ್ಳಿ ಕೊಲೆ ಮಾಡಿದ್ದಾನೆ.

ಮಹಿಳೆಯನ್ನು ಕೊಲೆ ಮಾಡಿದ ನಂತರ ಮಾನ್‍ಪಾಲ್ ಹಾಗೂ ಮಾಂತ್ರಿಕ ಸಂತ್‍ದಾಸ್ ದುರ್ಗಾ ದಾಸ್ ನದಿಯಲ್ಲಿ ಈಜಿ ನೆರೆಯ ಬದೌನ್ ಜಿಲ್ಲೆಗೆ ಪರಾರಿಯಾದರು. ಈ ಬಗ್ಗೆ ದೂರು ನೀಡಿದ ಬಳಿಕ ಪೊಲೀಸರು ಇಬ್ಬರನ್ನು ಬಂಧಿಸಿ, ನದಿಯಿಂದ ಮಹಿಳೆಯ ಶವವನ್ನು ಹೊರ ತೆಗೆದರು.

Comments

Leave a Reply

Your email address will not be published. Required fields are marked *