ಭಾರೀ ಮಳೆಯಿಂದ ತುಂಬಿ ಹರಿಯುತ್ತಿದ್ದ ಧರಣಿ ನದಿ- ಹುಚ್ಚು ಸಾಹಸಕ್ಕಿಳಿದ ವ್ಯಕ್ತಿ ನೀರುಪಾಲು

ಮುಂಬೈ/ಚಿಕ್ಕೋಡಿ: ಧಾರಾಕಾರ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿ ಪ್ರವಾಹಕ್ಕೆ ಸಿಲುಕಿ ವ್ಯಕ್ತಿಯೊರ್ವ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.

ಈ ಘಟನೆ ಮಹಾರಾಷ್ಟ್ರ ರಾಜ್ಯದ ಲಾತೂರ್ ಜಿಲ್ಲೆಯ ಶಿರೂರ ಅನಂತಪಾಲ ತಾಲೂಕಿನ ನಾಗೇವಾಡಿ ಗ್ರಾಮದ ಬಳಿಯ ಧರಣಿ ನದಿಯಲ್ಲಿ ನಡೆದಿದೆ. ಪ್ರಕಾಶ್ ಜಲಕೋಟೆ(32) ಮೃತಪಟ್ಟ ದುರ್ದೈವಿ.

ಶನಿವಾರ ಸಂಜೆ ಉಕ್ಕಿ ಹರಿಯುತ್ತಿದ್ದ ಧರಣಿ ನದಿ ದಾಟುವ ಹುಚ್ಚು ಸಾಹಸಕ್ಕೆ ಇಳಿದು ಪ್ರಕಾಶ್ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ನೀರಿನಲ್ಲಿ ಇಳಿಯಬೇಡ ಎಂಬ ಸಲಹೆಯನ್ನು ಕೇಳದೆ ಪ್ರವಾಹದಲ್ಲಿ ಇಳಿದಿದ್ದರು. ಪ್ರವಾಹಕ್ಕೆ ಸಿಲುಕಿ ನಾಗೇವಾಡಿ ಗ್ರಾಮದ ಪ್ರಕಾಶ್ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.

ಬಳಿಕ ಅಗ್ನಿ ಶಾಮಕ ದಳ ಹಾಗೂ ಪೊಲೀಸರ ಶೋಧ ಕಾರ್ಯಾಚರಣೆ ನಡೆಸಿದ್ದು, ಸದ್ಯ ಕೊಚ್ಚಿ ಹೋದಲ್ಲಿಂದ ಸಮೀಪದಲ್ಲಿಯೇ ಪ್ರಕಾಶ್ ಶವ ಪತ್ತೆಯಾಗಿದೆ.

ಈ ಕುರಿತು ಮಹಾರಾಷ್ಟ್ರದ ಶಿರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.

Comments

Leave a Reply

Your email address will not be published. Required fields are marked *