ಧಾರವಾಡ: ವಂಚಕನೊಬ್ಬ ತಿರುಪತಿ ತಿಮ್ಮಪ್ಪನ ಚಿನ್ನಾಭರಣ ಕೊಡುವುದಾಗಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬನನ್ನು ನಂಬಿಸಿ ಲಕ್ಷಾಂತರ ರೂ. ಮೋಸ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದಿಂದ ಗಡಿಪಾರಾಗಿರುವ ಚೀಟರ್ ಮೋನ್ಯಾ ಅಲಿಯಾಸ್ ಮೋಹನ್ ವಾಳ್ವೇಕರ್ ಎಂಬ ವ್ಯಕ್ತಿ ಮೋಸ ಮಾಡಿದ್ದಾನೆ. ಮಹಾರಾಷ್ಟ್ರದ ಕೊಲ್ಲಾಪುರ ನಿವಾಸಿ ಅಶ್ವಿನ್ ಪಾಟೀಲ ಎಂಬವರಿಗೆ ತಿರುಪತಿಯ ಚಿನ್ನ ಕೊಡುವುದಾಗಿ ಹೇಳಿ ಅವರಿಂದ 50 ಲಕ್ಷ ರೂ. ಪಡೆದು ಆರೋಪಿ ಪರಾರಿಯಾಗಿದ್ದಾನೆ. ಅಶ್ವಿನ್ ಬಳಿ ಮೊದಲು ಹಣ ಕೊಡಿ ನಂತರ ತಿರುಪತಿ ತಿಮ್ಮಪ್ಪನ ಚಿನ್ನಾಭರಣ ತಂದು ಕೊಡುತ್ತೇನೆ ಅಂತ ಹಣ ಪಡೆದು ಚಿನ್ನ ನೀಡದೆ ನಾಮ ಹಾಕಿದ್ದಾನೆ.

ಈ ಹಿಂದೆ ನಕಲಿ ನೋಟು ಹಾಗೂ ಜನರಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಚೀಟರ್ ಮೋನ್ಯಾ ಭಾಗಿಯಾಗಿದ್ದನು. ಆದರಿಂದ ಜಿಲ್ಲೆಯ ಪೊಲೀಸ್ ಆಯುಕ್ತರು ಮೋನ್ಯಾನನ್ನು ಗಡಿಪಾರು ಮಾಡಿ ಎಂದು ಆದೇಶ ಮಾಡಿದ್ದರು. ಆದ್ರೆ ಪೊಲೀಸ್ ಆಯುಕ್ತರ ಆದೇಶವನ್ನು ಮೀರಿ ನಗರದಲ್ಲೇ ಬಿಡು ಬಿಟ್ಟಿದ್ದ ಚೀಟರ್ ಮೋನ್ಯಾ ಜನರಿಗೆ ವಂಚನೆ ಮಾಡುವ ಕೆಲಸವನ್ನು ಮುಂದುವರಿಸಿದ್ದಾನೆ.
ಸದ್ಯ ಘಟನೆ ಕುರಿತು ಅಶ್ವಿನ್ ಆರೋಪಿ ಮೋನ್ಯಾ ಹಾಗೂ ಅವನ ಕುಟುಂಬದ ಮೇಲೆ ದೂರು ನೀಡಿದ್ದು, ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply