ಕೊಟ್ಟ ದುಡ್ಡು ವಾಪಸ್ ಕೇಳಿದ್ದಕ್ಕೆ ಮಹಿಳೆ ಮೇಲೆ ನಡುರಸ್ತೆಯಲ್ಲೇ ಹಲ್ಲೆ!

ಚಿಕ್ಕೋಡಿ: ಕೊಟ್ಟ ದುಡ್ಡು ವಾಪಸ್ ಕೇಳಿದ್ದಕ್ಕೆ ಮಹಿಳೆ ಮೇಲೆ ನಡು ರಸ್ತೆಯಲ್ಲಿ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರಗಾಂವ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕಮಲಾ ಮಾಳಿ ಮೇಲೆ ರಾಮಪ್ಪ ನೇರಲೆ ಹಲ್ಲೆ ನಡೆಸಿದ್ದಾನೆ. ಕಮಾಲಾಳಿಂದ 20,000 ಸಾವಿರ ಹಣವನ್ನ ಕೈಗಡ ರೂಪದಲ್ಲಿ ಪಡೆದಿದ್ದ ರಾಮಪ್ಪ, ಹಣ ವಾಪಸ್ ನೀಡಲು ನಿರಾಕರಣೆ ಮಾಡಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ.

ಕೆಲ ದಿನಗಳಿಂದ ಪಡೆದಿದ್ದ ಹಣವನ್ನ ವಾಪಸ್ ನೀಡುವಂತೆ ಒತ್ತಾಯ ಪೂರ್ವಕವಾಗಿ ಕೇಳಿದ್ದಕ್ಕೆ ಕಮಲಾ ಮೇಲೆ ರಾಮಪ್ಪ ಹಲ್ಲೆ ನಡೆಸಿದ್ದು, ಜಗಳ ವಿಕೋಪಕ್ಕೆ ತಿರುಗಿ ಇಬ್ಬರು ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ.

ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿರುವ ಆರೋಪಿಯನ್ನ ಚಿಕ್ಕೋಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *