ಮತ್ತೋರ್ವನ ಜೊತೆ ಯುವತಿಯ ಸುತ್ತಾಟ-ಪ್ರಿಯತಮೆಯನ್ನ ಕೊಂದ ಮಾಜಿ ಗೆಳೆಯ ಅರೆಸ್ಟ್

ತುಮಕೂರು: ಪ್ರೇಯಸಿಯನ್ನು ಕೊಂದ ಪ್ರಿಯಕರನನ್ನು ಹುಲಿಯೂರುದುರ್ಗ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

ಅರ್ಪಿತಾ(26) ಕೊಲೆಯಾದ ಪ್ರೇಯಸಿ. ಬೆಂಗಳೂರಿನ ಲೋಹಿತ್(27) ಬಂಧಿತ ಆರೋಪಿ. ಫೆಬ್ರವರಿ 3ರಂದು ಕುಣಿಗಲ್ ತಾಲೂಕಿನ ಸಂತೆಮಾವತ್ತೂರಿನಲ್ಲಿ ಲೋಹಿತ್ ತನ್ನ ಪ್ರೇಯಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿ ಆಗಿದ್ದನು.

ಅರ್ಪಿತಾ ತನ್ನ ಪ್ರಿಯಕರ ಲೋಹಿತ್‍ನನ್ನು ಬಿಟ್ಟು ಬೇರೆ ವ್ಯಕ್ತಿ ಜೊತೆ ತಿರುಗಾಡುತ್ತಿದ್ದಳು. ಇದರಿಂದ ಕೋಪಗೊಂಡ ಲೋಹಿತ್ ತನ್ನ ಪ್ರೇಯಸಿ ಅರ್ಪಿತಾಳನ್ನು ಕೊಲೆ ಮಾಡಿದ್ದಾನೆ. ಯುವತಿ ಧರಿಸಿದ್ದ ಎZ ಪಿ ಪೆಟ್ರೋಲ್ ಬಂಕ್ ಸಮವಸ್ತ್ರ ಆಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಹುಲಿಯೂರುದುರ್ಗ ಪೊಲೀಸರು ಆರೋಪಿ ಲೋಹಿತ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *