ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಕೊಂದೇ ಬಿಟ್ಟ!

ಹೈದರಾಬಾದ್: ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಕೊಂದಿರುವ ಅಮಾನವೀಯ ಘಟನೆ ನಗರದ ಮೋಸಾಪೇಟ್‍ನಲ್ಲಿ ನಡೆದಿದೆ.

ಶ್ರೀಕಾಕುಲಂನ ಬೋನು ಜಾನಕಿ ಕೊಲೆಯಾದ ದುರ್ದೈವಿ. ಈಕೆ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಹಬಿಬ್‍ನಗರದಲ್ಲಿ ವಾಸವಿದ್ದಳು. ಅದೇ ನಗರದಲ್ಲಿ ವಾಸವಿದ್ದ ಆನಂದ್. ಪ್ರೀತಿ ಹೆಸರಲ್ಲಿ ಆಕೆಯ ಹಿಂದೆ ಸುತ್ತಾಡುತ್ತ ತೊಂದರೆ ಕೊಡುತ್ತಿದ್ದನು.

ಆನಂದ್ ಒಂದು ದಿನ ತನ್ನ ಪ್ರೀತಿಯನ್ನು ಹೇಳಿದ್ದಾನೆ. ಆದರೆ ಜಾನಕಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆನಂದ್ ಜಾನಕಿಗೆ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಜಾನಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ ಪೊಲೀಸರು ಈ ಬಗ್ಗೆ ಕಠಿಣವಾದ ಕ್ರಮವನ್ನು ತೆಗೆದುಕೊಂಡಿಲ್ಲ.

ಮಂಗಳವಾರ ಸಂಜೆ ಜಾನಕಿ ತನ್ನ ಮನೆಯಲ್ಲಿ ಒಬ್ಬಳೆ ಇದ್ದಳು. ಈ ಸಂದರ್ಭದಲ್ಲಿ ಆನಂದ್ ಮನೆಗೆ ಬಂದು ಏಕಾಏಕಿ ಜಾನಕಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಂದಿದ್ದಾನೆ. ಆರೋಪಿ ಆನಂದ್ ಕೊಲೆ ಮಾಡಿ ತಲೆ ಮರಿಸಿಕೊಂಡಿದ್ದನು. ಪೊಲೀಸರು ಇಂದು ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *