ಮೂರು ದಿನ ಬಾವಿಯೊಳಗೆ ಇದ್ದು ಬದುಕಿ ಬಂದ ಬೆಂಗಳೂರಿನ ಹಿರಿಯ ವ್ಯಕ್ತಿ

ಚೆನ್ನೈ: ಆಕಸ್ಮಿಕವಾಗಿ ಸುಮಾರು 50 ಅಡಿ ಆಳದ ಬಾವಿಗೆ ಬಿದ್ದಿದ್ದ 74 ವಯಸ್ಸಿನ ವ್ಯಕ್ತಿಯೊಬ್ಬರನ್ನು ಮೂರು ದಿನಗಳ ನಂತರ ರಕ್ಷಿಸಿದ ಘಟನೆ ಚೆನ್ನೈನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ತಿರುತ್ತಣಿಯಲ್ಲಿ ನಡೆದಿದೆ.

ಚಾಕುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ರಂಗರಾಜುಲು (74) ಗುರುವಾರ ಬಾವಿಗೆ ಬಿದ್ದಿದ್ದರು. ಮೂರು ದಿನಗಳ ಕಾಲ ಒಂದೂವರೆ ಅಡಿ ನೀರಿನ ಆಳದಲ್ಲಿ ನಿಂತಿದ್ದರು. ಪೋಲಿಸರು ಅಗ್ನಿಶಾಮಕ ದಳ ಮತ್ತು ರಕ್ಷಣಾ ಸೇವಾ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ನಂತರ ಅವರು ಸ್ಥಳಕ್ಕೆ ಬಂದು ಅವರನ್ನು ಮೇಲಕ್ಕೆತ್ತಿದ್ದಾರೆ.

ಮೂರು ದಿನ ನೀರಿನಲ್ಲಿ ಇದ್ದುದ್ದರಿಂದ ಅವರ ಪಾದ ಉದಿಕೊಂಡಿತ್ತು. ಅಗ್ನಿಶಾಮಕ ಅಧಿಕಾರಿ ಎನ್. ಬಸ್ಕರನ್ ಅವರ ನೇತೃತ್ವದ ತಂಡವು ಸುಮಾರು ಒಂದು ಗಂಟೆಯ ಕಾಲ ಕಾರ್ಯಾಚರಣೆ ನಡೆಸಿ ಮೇಲಕ್ಕೆ ಎತ್ತಿದ್ದಾರೆ.

ಮೊದಲು ಪಾಳು ಬಾವಿಯ ಸುತ್ತಾ ಬೆಳೆದಿದ್ದ ಸಸ್ಯ, ಮುಳ್ಳುಗಳನ್ನು ತೆರವು ಗೊಳಿಸಿದರು. ನಂತರ ಡ್ರೈವರ್ ಎಂ. ಶಿಕುಮಾರ್ ಮತ್ತು ಮೆಕ್ಯಾನಿಕ್ ಹರಿ ಕೃಷ್ಣ ಅವರನ್ನು ಮೊದಲಿಗೆ ಹಗ್ಗದ ಸಹಾಯದಿಂದ ಬಾವಿಯೊಳಗೆ ಕೆಳಗೆ ಇಳಿಸಿ ರಾಜುಲು ಅವರನ್ನು ಮೇಲಕ್ಕೆ ಕರೆತಂದರು ಎಂದು ಹೇಳಿದರು.

ರಾಜು ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿಸಿದ್ದು, ಸದ್ಯಕ್ಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾವಿಗೆ ಬಿದ್ದ ತಕ್ಷಣ ನಾನು ಕೂಗಿದೆ. ಆದರೆ ಯಾರು ಇಲ್ಲದ ಕಾರಣ ಕೇಳಿಸಲಿಲ್ಲ. ಊಟ, ನಿದ್ದೆ ಇಲ್ಲದೆ ನನ್ನ ಧ್ವನಿಯನ್ನು ಕಳೆದುಕೊಂಡಿದ್ದೆ. ಬಾವಿಯ ನೀರು ಹಾಗೂ ಅಲ್ಲಿದ್ದ ಎಲೆಗಳನ್ನು ಸೇವಿಸುತ್ತಿದ್ದೆ ಎಂದು ತಾವು ಅನುಭವಿಸಿದ ಕಷ್ಟವನ್ನು ಅಧಿಕಾರಿಗೆ ಹೇಳಿಕೊಂಡರು.

ಹೇಗಾಯಿತು?: ರಾಜುಲು ಮೂಲತಃ ಬೆಂಗಳೂರಿನ ಕೋರಮಂಗಲದವರು. ಅವರು ಸೆ.26 ರಂದು ಕತ್ತಿಗಳನ್ನು ಮಾರಾಟ ಮಾಡಲು ತಿರುತ್ತಣಿಗೆ ಹೋಗಿದ್ದರು. ವ್ಯಾಪಾರ ಮಾಡಿ ಹಿಂದಿರುಗುತ್ತಿದ್ದಾಗ ಅಲ್ಲೇ ಸಮೀಪದಲ್ಲಿದ್ದ ಎಂ.ಸಿ ಕೃಷ್ಣ ಬಾಬು ಅವರ ತೋಟಕ್ಕೆ ಶೌಚಾಲಯ ಮಾಡಲು ಹೋಗಿದ್ದಾರೆ. ಆಕಸ್ಮತಾಗಿ ಬಾವಿಗೆ ಬಿದ್ದಿದ್ದಾರೆ. ಕುಟುಂಬವು ಮನೆಗೆ ಬಾರದೆ ಇದ್ದುದ್ದರಿಂದ ಗಾಬರಿಯಾಗಿ ತಿರುತ್ತಣಿ ಪೊಲೀಸರಿಗೆ ದೂರು ನೀಡಿದ್ದಾರೆ.

ಶನಿವಾರ ಕೃಷ್ಣ ಬಾಬುವಿನ ತೋಟದಲ್ಲಿ ಯಾರೋ ಪದೇ ಪದೇ ಕೂಗಿದ ಶಬ್ಧ ಕೇಳಿ ಬರುತ್ತಿತ್ತು. ನಂತರ ಕೃಷ್ಣ ಅವರು ನೋಡಿ ರಕ್ಷಣಾ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

Comments

Leave a Reply

Your email address will not be published. Required fields are marked *