ಆಫ್ರಿಕನ್ ಜಂಗಲ್ ಅಡ್ವೆಂಚರ್ ಕಥೆ ಹೇಳಲು ಹೊರಟ ರಾಜಮೌಳಿ- ಮಹೇಶ್ ಬಾಬು.!

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ರಾಜಮೌಳಿ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. `ಸರ್ಕಾರು ವಾರಿ ಪಾಟ’ ಸಿನಿಮಾ ಗೆಲುವಿನ ನಂತರ `ಬಾಹುಬಲಿ’ ನಿರ್ದೇಶಕನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಚಿತ್ರ `ಮೇಜರ್’ಗೆ ನಿರ್ಮಾಪಕನಾಗಿರುವ ಮಹೇಶ್ ಬಾಬು ಈ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.`ಸರ್ಕಾರು ವಾರಿ ಪಾಟ’ ಚಿತ್ರದ ಸಕ್ಸಸ್ ನಂತರ ಹೊಸ ಬಗೆಯ ಪಾತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ಜಕ್ಕಣ್ಣ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಹೊಸ ಚಿತ್ರ ಮೂಡಿಬರಲಿದ್ದು, ಆಫ್ರಿಕನ್ ಜಂಗಲ್ ಅಡ್ವೆಂಚರ್ ಕಥೆಯಲ್ಲಿ ಪ್ರಿನ್ಸ್ ಮಹೇಶ್ ಬಾಬು ಮಿಂಚಲಿದ್ದಾರೆ. ಇದನ್ನೂ ಓದಿ: `ನೈಟ್ ಕರ್ಫ್ಯೂ’ ಮೂಲಕ ನಟನೆಗೆ ಮರಳಿದ ಮಾಲಾಶ್ರೀ

ಎಂದೂ ಮಾಡಿರದ ಭಿನ್ನ ಪಾತ್ರದಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ತಿದ್ದು, ಈ ಬಾರಿ ಆಫ್ರಿಕನ್ ಜಂಗಲ್ ಅಡ್ವೆಂಚರ್ ಕಥೆ ಹೇಳಲು ಹೊರಟಿದ್ದಾರೆ. ನಿರ್ದೇಶಕ ತ್ರಿವಿಕ್ರಮ್ ಚಿತ್ರದಲ್ಲಿ ನಟಿಸುತ್ತಿರುವ ಮಹೇಶ್ ಬಾಬು ಈ ಚಿತ್ರದ ನಂತರವೇ ರಾಜಮೌಳಿ ನಿರ್ದೇಶನದಲ್ಲಿ ನಟಿಸಲಿದ್ದಾರೆ. ಡಿಫರೆಂಟ್ ಕಥೆ ಮತ್ತು ಪಾತ್ರದ ಮೂಲಕ ಕಮಾಲ್ ಮಾಡಲು ಮಹೇಶ್ ಬಾಬು ಸಜ್ಜಾಗಿದ್ದಾರೆ.

Comments

Leave a Reply

Your email address will not be published. Required fields are marked *