ಇಂದು ಮಹಾಶಿವರಾತ್ರಿ ಹಬ್ಬದ ಸಂಭ್ರಮ- ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ

ಬೆಂಗಳೂರು: ಇಂದು ಮಹಾಶಿವರಾತ್ರಿ ಹಬ್ಬ. ನಾಡಿನಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ. ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.

ನಗರದ ಕೆ.ಆರ್.ಮಾರುಕಟ್ಟೆ, ಬಸವನಗುಡಿ, ಮಲ್ಲೇಶ್ವರ, ಯಶವಂತರಪುರ ಸೇರಿದಂತೆ ಎಲ್ಲಾ ಕಡೆ ಖರೀದಿ ಭರಾಟೆ ಜೋರಾಗಿದೆ. ಶಿವನ ಆರಾಧನೆ ವೇಳೆ ಬಿಲ್ವ ಪತ್ರೆ, ಮಲ್ಲಿಗೆ ಹೂವಿನದರ ಮಾತ್ರ ಏರಿಕೆ ಕಂಡಿದೆ. ಈ ಹಬ್ಬದಲ್ಲಿ ಬಹುತೇಕ ಎಲ್ಲರೂ ಉಪವಾಸ ವ್ರತ ಆಚರಣೆ ಹಿನ್ನೆಲೆಯಲ್ಲಿ ಹೂವಿಗಿಂತ, ಹಣ್ಣು, ತರಕಾರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಪರಿಣಾಮ ಹಣ್ಣು, ತರಕಾರಿ ಬೆಲೆ ಕೊಂಚ ಏರಿಕೆ ಕಂಡಿದೆ.

ಹೂವಿನ ದರ ಎಷ್ಟು?
ಮಲ್ಲಿಗೆ ಕೆಜಿಗೆ 300 ರೂ. ಇದ್ದರೆ 500 ರೂ. ಏರಿಕೆಯಾಗಿದೆ. ಸೇವಂತಿ 200 ರೂ.ನಿಂದ 250ಕ್ಕೆ ಏರಿಕೆಯಾಗಿದ್ದರೆ ಗುಲಾಬಿ 100 ರೂ. ನಿಂದ 150 ರೂ.ಗೆ ಏರಿಕೆಯಾಗಿದೆ. ಬಿಲ್ವಪತ್ರೆ ಒಂದು ಕಟ್ಟಿಗೆ 10 ರೂ. ಇದ್ದರೆ ಈಗ 20 ರೂ. ಆಗಿದೆ.

ಹಣ್ಣಿನ ದರ ಎಷ್ಟು?
ಸೇಬು ಕೆಜಿಗೆ 80 ರೂ. ಇದ್ದರೆ 100 ರೂ. ಏರಿಕೆಯಾಗಿದೆ. ಕರ್ಬೂಜ ಕೆಜಿಗೆ 30 ರೂ.ಯಿಂದ 35 ರೂ.ಕ್ಕೆ ಹೆಚ್ಚಾಗಿದೆ. ಕಲ್ಲಂಗಡಿ ಕೆಜಿಗೆ 10 ರೂ.ಯಿಂದ 15 ರೂ. ಏರಿಕೆಯಾಗಿದೆ. ದಾಳಿಂಬೆ ಕೆಜಿಗೆ 80 ರೂ.ಯಿಂದ 100 ರೂ. ಹೆಚ್ಚಾಗಿದೆ.

ತರಕಾರಿ ದರ ಎಷ್ಟು?
ಹುರುಳಿಕಾಯಿ ಕೆಜಿಗೆ 40 ರೂ. ಇದ್ದರೆ 45 ರೂ. ಏರಿಕೆಯಾಗಿದೆ. ಅವರೇಕಾಯಿ ಕೆಜಿಗೆ 40 ರೂ.ಯಿಂದ 45 ರೂ. ಹೆಚ್ಚಾಗಿದೆ. ಕ್ಯಾರೆಟ್ ಕೆಜಿಗೆ 20 ರೂ.ಯಿಂದ ಕೆಜಿ 25 ರೂ. ಏರಿಕೆಯಾಗಿದ್ದರೆ, ಬೆಂಡೆಕಾಯಿ ಕೆಜಿಗೆ 60 ರೂಯಿಂದ 65 ರೂ. ಹೆಚ್ಚಾಗಿದೆ.

ಪೂಜಾ ಸಾಮಾಗ್ರಿಗಳ ದರದ ವಿವರ: ಶಿವಧಾರ ಒಂದಕ್ಕೆ 2 ರೂ ಇದ್ದರೆ, ವಿಭೂತಿ ಗಟ್ಟಿ- ಒಂದಕ್ಕೆ 30 ರೂ. ಇದೆ ಹಾಗೂ ವಸ್ತ್ರ ಒಂದಕ್ಕೆ 10 ರೂ. ಆಗಿದೆ.

ಹಬ್ಬದ ಹಿನ್ನೆಲೆಯಲ್ಲಿ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಕೆಲ ಗ್ರಾಹಕರು ಹೇಳಿದರೆ ಮತ್ತೆ ಕೆಲವೆಡೆ ಸಂಕ್ರಾಂತಿ, ಲಕ್ಷ್ಮೀ ಹಬ್ಬಕ್ಕಿಂತ ಬೆಲೆ ಏರಿಕೆ ಕಡಿಮೆ ಇದೆ. ಖರೀದಿಗೆ ಅಡ್ಡಿ ಇಲ್ಲ ಎಂದು ಹೇಳಿದ್ದಾರೆ. ದೇಗುಲಗಳಲ್ಲಿ ಇಂದು ವಿಶೇಷ ಪೂಜೆ ನಡೆಯುತ್ತಿದೆ. ಶಿವ ದೇಗುಲ ಮುರುಡೇಶ್ವರ, ಕೊಯಮತ್ತೂರಿನ ಶಿವ ದೇಗುಲದಲ್ಲೂ ವಿಶೇಷ ಪೂಜೆ ಪುನಸ್ಕಾರ ಜರುಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *