ಮಕ್ಕಳ ಕಳ್ಳನೆಂದು ಮಹಾರಾಷ್ಟ್ರದಲ್ಲಿ ಕೊಲೆಯಾಗಿದ್ದ ವ್ಯಕ್ತಿಯ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ

ವಿಜಯಪುರ: ಮಕ್ಕಳ ಕಳ್ಳ ಎಂದು ತಿಳಿದು ಮಹಾರಾಷ್ಟ್ರದಲ್ಲಿ ಕೊಲೆಯಾಗಿದ್ದ ಮೃತ ದೇಹವನ್ನು ರಾಜ್ಯಕ್ಕೆ ತರಲಾಗಿದೆ.

ಜಿಲ್ಲೆಯ ಇಂಡಿ ತಾಲೂಕಿನ ಗುಂದಾವನ ಗ್ರಾಮದ ರಾಜು ಭೋಸ್ಲೆ (45) ಹತ್ಯೆಗೀಡಾದ ದುರ್ದೈವಿ. ಜುಲೈ 1ರಂದು ಮಹಾರಾಷ್ಟ್ರದ ಧೂಳೆ ಎಂಬ ಗ್ರಾಮದ ಗ್ರಾಮಸ್ಥರು ಮಕ್ಕಳ ಕಳ್ಳರೆಂದು ಭಾವಿಸಿ 5 ಮಂದಿಯನ್ನು ಹೊಡೆದು ಕೊಲೆ ಮಾಡಿದ್ದರು. ಅಂದು ಮೃತಪಟ್ಟ ಐವರಲ್ಲಿ ರಾಜು ಕೂಡ ಒಬ್ಬರಾಗಿದ್ದರು. ರಾಜು ಮಹಾರಾಷ್ಟ್ರದಲ್ಲಿ ಭಿಕ್ಷಾಟನೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಇದನ್ನೂ ಓದಿ: ರಂಜಾನ್ ಪ್ರಯುಕ್ತ ಭಿಕ್ಷಾಟನೆಗೆ ಬಂದಿದ್ದ ಐವರು ಮಹಿಳೆಯರನ್ನು ಮಕ್ಕಳ ಕಳ್ಳರೆಂದು ತಿಳಿದು ಒಂದು ದಿನ ಕೂಡಿ ಹಾಕಿದ್ರು

ಧೂಳೆ ಗ್ರಾಮದ ಜನರ ತಪ್ಪು ತಿಳುವಳಿಕೆಯಿಂದ ರಾಜು ಭೋಸ್ಲೆ ಕೂಡ ಘಟನೆಯಲ್ಲಿ ಹತ್ಯೆಗೀಡಾಗಿದ್ದರು. ಘಟನೆ ಸಂಬಂಧ ಮಂಗಳವಾರ ರಾಜು ಭೋಸ್ಲೆ ಶವವನ್ನು ಝಳಕಿ ಪೊಲೀಸರ ಸಮ್ಮುಖದಲ್ಲಿ ಮಹಾರಾಷ್ಟ್ರದ ಪೊಲೀಸರು ಹಸ್ತಾಂತರಿಸಿದ್ದಾರೆ. ರಾಜು ಭೋಸ್ಲೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಇಂದು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

Comments

Leave a Reply

Your email address will not be published. Required fields are marked *