ಮಹದಾಯಿ ವಿಷಯದಲ್ಲಿ ಮತ್ತೆ ಗೋವಾ ಕ್ಯಾತೆ – ಕರ್ನಾಟಕದ ವಿರುದ್ಧ ತುರ್ತು ತನಿಖೆಗೆ ಶಾಸಕ ಮನವಿ

ಧಾರವಾಡ: ಪದೇ ಪದೇ ಮಹದಾಯಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಲೇ ಬಂದಿರುವ ಗೋವಾ ಶಾಸಕರು ಹಾಗೂ ಸರ್ಕಾರ, ಈಗ ಮತ್ತೆ ಅದೇ ರಾಗ ಆರಂಭಿಸಿದೆ.

ಮಹದಾಯಿ ವಿಷಯದಲ್ಲಿ ಕ್ಯಾತೆ ತೆಗೆದಿರುವ ಗೋವಾದ ಶಾಸಕ ವಿಜಯ್ ಸರದೇಸಾಯಿ, ಕರ್ನಾಟಕ ಸರ್ಕಾರದ ವಿರುದ್ಧ ತುರ್ತು ತನಿಖೆಗೆ ಆಗ್ರಹಿಸಿದ್ದಾರೆ. ಕಣಕುಂಬಿ ಬಳಿ ಕರ್ನಾಟಕ ಅನಧಿಕೃತ ಕಾಮಗಾರಿ ನಡೆಸುತ್ತಿರುವ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಡೆಯುತ್ತಿದ್ದಂತೆ ಕುಸಿದ ಫುಟ್‍ಪಾತ್ – ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರು

ಪರಿಸರವಾದಿ ರಾಜೇಂದ್ರ ಕರ್ಕೇರಾ ಹೇಳಿಕೆ ಆಧರಿಸಿ ವಿಜಯ್ ಆರೋಪ ಮಾಡಿದ್ದು, ಕರ್ನಾಟಕ ನ್ಯಾಯಾಂಗದ ಆದೇಶ ಮೀರಿ ಕಾಮಗಾರಿ ಮಾಡುತ್ತಿದ್ದಾರೆ. ಕರ್ನಾಟಕ ಕಳಸಾ-ಬಂಡೂರಿ ನಾಲೆ ಬಳಿ ಗುರುತು ಕಂಬ ನೆಟ್ಟಿದೆ. ಈ ಆಧಾರವನ್ನು ಮುಂದಿಟ್ಟುಕೊಂಡು ಕಾಮಗಾರಿ ನಡೆಸಿರುವ ಕುರಿತಾಗಿ ವೀಡಿಯೋ ಸಮೇತ ಸುಪ್ರಿಂಕೋರ್ಟ್ ಗಮನಕ್ಕೆ ತರಲು ಶಾಸಕ ಆಗ್ರಹಿಸಿದ್ದು, ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಐವರ ಪ್ರಾಣ ಉಳಿಸಿದೆ ಅಂಗಾಂಗ ದಾನ – ಮಗನ ಸಾವಿನಲ್ಲಿ ಸಾರ್ಥಕತೆ ಕಂಡ ಕುಟುಂಬ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *