ಕೆಲವೇ ದಿನಗಳಲ್ಲಿ ಕರುವಿಗೆ ಜನ್ಮ ನೀಡಲಿದ್ದ ಹಸು ಹುಲಿ ಬಾಯಿಗೆ ಬಲಿ

ಮಡಿಕೇರಿ: ಗಬ್ಬದ ಹಸುವನ್ನು ಭತ್ತದ ಗದ್ದೆ ಬಳಿ ಮೇಯಲು ಕಟ್ಟಿ ಹಾಕಿದ್ದ ಸಂದರ್ಭ ಹುಲಿಯೊಂದು ದಾಳಿ ನಡೆಸಿ ಕೊಂದು ಹಾಕಿದೆ. ಈ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಪಂಚಾಯ್ತಿ ವ್ಯಾಪ್ತಿಯ ಹರಿಹರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತರಾದ ಬಾಚೀರ ಸುರಕ್ಷಾ, ಸುಗಂಧ ಅವರಿಗೆ ಸೇರಿದ ಗಬ್ಬದ ಹಸುವನ್ನು ಹುಲಿ ಕೊಂದು ಹಾಕಿದ್ದು ಗದ್ದೆಯಿಂದ ಅನತಿ ದೂರದವರೆಗೆ ಎಳೆದುಕೊಂಡು ಹೋಗಿ ತಿಂದು ಹಾಕಿದೆ. ಸಂಜೆಯ ವೇಳೆ ಹಸುವನ್ನು ಕೊಟ್ಟಿಗೆಗೆ ಕರೆತರಲು ಕಾರ್ಮಿಕ ಗದ್ದೆ ಬಳಿ ತೆರಳಿದ ಸಂದರ್ಭದಲ್ಲಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಸುದ್ದಿ ತಿಳಿದ ಮನೆಯ ಯಜಮಾನ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಹುಲಿ ದಾಳಿಯಿಂದ ಜಾನುವಾರುಗಳು ಸಾಯುತ್ತಿದ್ದು ರೈತನಿಗೆ ದಿಕ್ಕು ತೋಚದಂತಾಗಿದೆ. ಇನ್ನೂ ಕೆಲವು ದಿನಗಳಲ್ಲಿ ಹಸು ಕರುವಿಗೆ ಜನ್ಮ ನೀಡುವ ಸಂದರ್ಭವಿತ್ತು ಎಂದು ಹಸುವಿನ ಮಾಲೀಕ ಮಾಹಿತಿ ನೀಡಿದರು.

ರೈತ ಸಂಘ ಪ್ರತಿಭಟನೆ ನಡೆಸಿದರು, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನ ಗ್ರಾಮಸ್ಥರು ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *