ಏರ್ ಶೋ ವೇಳೆ ಕಾರು ಸುಟ್ಟ ಪ್ರಕರಣ: ಮಾಲೀಕರಿಗೆ ಚೆಕ್ ವಿತರಣೆ

ಬೆಂಗಳೂರು: ಏರ್ ಶೋ ವೇಳೆ ಕಾರು ಸುಟ್ಟು ಹೋಗಿರುವ ಮಾಲೀಕರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹಾಯ ಮಾಡೋದಾಗಿ ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಇನ್ಶ್ಯೂರೆನ್ಸ್ ಇಲ್ಲದವರಿಗೆ ಪರಿಹಾರ ನೀಡುವುದಕ್ಕೆ ಸಿಎಂ ಕುಮಾರಸ್ವಾಮಿ ಒಪ್ಪಿದ್ದಾರೆ ಎಂದು ಮಂಗಳವಾರ ವಿಧಾನಸೌಧದಲ್ಲಿ ಅಗ್ನಿ ಅವಘಡದಲ್ಲಿ ಕಾರು ಕಳೆದುಕೊಂಡಿರುವ ಕೆಲವರಿಗೆ ಪರಿಹಾರದ ಚೆಕ್ ವಿತರಿಸಿ ಮಾತಾಡಿದ್ದಾರೆ.

ಸುಬೋದಿಪ್ ಹಾಜ್ರಾ, ರಮಾಕಾಂತ್ ಹಾಗೂ ಗಿರಿಜಮ್ಮ ಎನ್ನುವರಿಗೆ ಇನ್ಶ್ಯೂರೆನ್ಸ್ ಚೆಕ್ ವಿತರಿಸಿದರು. ಬೆಂಗಳೂರಿನ ಯಲಹಂಕದಲ್ಲಿ ಏರ್ ಶೋ ನಡೆಯುವ ವೇಳೆ 277 ಕಾರುಗಳು ಸುಟ್ಟು ಹೋಗಿದ್ದವು.

251 ಕಾರುಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಇವುಗಳಲ್ಲಿ 60 ವಾಹನಗಳು ಗುರುತಿಸಲಾಗದ ಸ್ಥಿತಿಯಲ್ಲಿವೆ. 26 ಕಾರುಗಳು ಅರ್ಧ ಸುಟ್ಟು ಹೋಗಿವೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *