ಅವ್ಳು ನನ್ನ ಹುಡ್ಗಿ ಎಂದ ಗೆಳೆಯನನ್ನ ಕೊಂದ ಸ್ನೇಹಿತ

-ರಾತ್ರಿ ಗೆಳೆಯರಿಬ್ಬರ ಎಣ್ಣೆ ಪಾರ್ಟಿ

ಬೆಂಗಳೂರು: ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಇಬ್ಬರು ಯುವಕರು ತಡರಾತ್ರಿವರೆಗೆ ಒಟ್ಟಿಗೆ ಪಾರ್ಟಿ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ಗಲಾಟೆ ಶುರುವಾಗಿ, ಕೊಲೆಯಲ್ಲಿ ಅಂತ್ಯವಾಗಿದೆ.

ಹೆಣ್ಣೂರಿನ ಜಾನಕಿರಾಮ ಲೇಔಟ್ ನಲ್ಲಿ ಘಟನೆ ನಡೆದಿದ್ದು, ಮೊರೋಡೆ (29) ಕೊಲೆಯಾದ ನೈಜೀರಿಯನ್ ಪ್ರಜೆ, ಸ್ಯಾಮ್ಯೂಯಲ್ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೈಜೀರಿಯಾದಿಂದ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದ ವೆರೋಡೆ ಮತ್ತು ಸ್ಯಾಮ್ಯೂಯಲ್, ಕೆಲ ವರ್ಷಗಳಿಂದ ಜೊತೆಯಲ್ಲಿಯೇ ವಾಸವಾಗಿದ್ದರು. ವೀಕ್ ಎಂಡ್ ಬಂದರೆ ಸಾಕು ಭರ್ಜರಿ ಪಾರ್ಟಿ ಮಾಡುತ್ತಿದ್ದರು. ಶನಿವಾರ ಸಹ ತಡರಾತ್ರಿವರೆಗೆ ಪಾರ್ಟಿ ಮಾಡಿದ್ದು, ಇದೇ ವೇಳೆ ಇಬ್ಬರ ಮಧ್ಯೆ ಹುಡುಗಿ ವಿಚಾರ ಹೊರಬಂದಿತ್ತು.

ಅವಳು ನನ್ನ ಹುಡುಗಿ, ಎಂದು ವೆರೂಡೆ ಅಂದ್ರೆ, ಇಲ್ಲ ಅವಳು ನನ್ನ ಹುಡುಗಿ ಎಂದು ಸ್ಯಾಮ್ಯೂಯಲ್ ಅಂತಿದ್ದ. ಇದೇ ವಿಚಾರ ಸಂಬAಧ ಇಬ್ಬರ ಮಧ್ಯೆ ಜೋರು ಗಲಾಟೆ ಆಗಿದೆ. ಎಣ್ಣೆ ಏಟಲ್ಲಿ ಒಂದೇ ಯುವತಿಗಾಗಿ ನಡೆದ ಈ ಗಲಾಟೆ ಮುಂಜಾನೆವರೆಗೂ ಮುಂದುವರಿದಿದೆ. ಕೊನೆಗೆ ಬೆಳಗಿನ ಜಾವ ಸುಮಾರು ನಾಲ್ಕು ಗಂಟೆ ಮತ್ತೆ ಜಗಳ ಶುರುಮಾಡಿದ ಸ್ಯಾಮ್ಯೂಯಲ್, ವೆರೋಡೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾದ ಕಾರಣ, ವೆರೋಡೆ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾನೆ.

ವಿಚಾರ ತಿಳಿದ ಹೆಣ್ಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸ್ಯಾಮ್ಯೂಯಲ್ ನನ್ನು ಬಂಧಿಸಿದ್ದಾರೆ. ಒಂದೇ ಹುಡುಗಾಗಿ ಇಬ್ಬರ ನಡುವಿನ ಗಲಾಟೆಯಲ್ಲಿ ಜೊತೆಗಿದ್ದ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ.

Comments

Leave a Reply

Your email address will not be published. Required fields are marked *